ದೇಶದ ಗೃಹಮಂತ್ರಿ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಿ ಚುನಾವಣೆಗೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಚುನಾವಣೆ ರಾಜ್ಯದಲ್ಲಿ ಹೈ ವೋಲ್ಟೇಜ್ ಕ್ಷೇತ್ರ. ೨೦೧೯ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ೨೫ ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿತ್ತು ಆದರೆ ಮೋದಿ ಮತ್ತು ರಾಜ್ಯ ನಾಯಕ ಯಡಿಯೂರಪ್ಪನವರ ವರ್ಚಸ್ಸಿನಲ್ಲೂ ಡಿಕೆ ಸುರೇಶ ಗೆಲುವಿನ ನಗೆ ಬೀರಿದ್ದರು. ಅಂತಹ ಪ್ರಚಂಡವನ್ನು ಹಿಡಿತವನ್ನು ಡಿಕೆ ಸಹೋದರರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇದೆ. ೨೦೨೩ರಲ್ಲಿ ನಡೆಯುತ್ತಿರುವ ಚುನಾವಣೆ ಕೊಂಚ ಭಿನ್ನ! ಕಾರಣ ಜಯದೇವ ಹೃದಯದ ಆಸ್ಪತ್ರೆಯನ್ನು ವಿಶ್ವವಿಖ್ಯಾತ ಮಾಡಿದ ಕೀರ್ತಿವಂತ ಮತ್ತು ಹೃದಯವಂತ ವೈದ್ಯ ಮಂಜುನಾಥರವರು ಲೋಕಸಭೆಯ ಅಖಾಡಕ್ಕೆ ಇಳಿದಿದ್ದಾರೆ.
ವೈದ್ಯರಾದ ಮಂಜುನಾಥರವರು ಏಕೆ ಭಿನ್ನವಾಗಿ ನಿಲ್ಲುತ್ತಾರೆ?
ಒಂದು ಸರ್ಕಾರಿ ಆಸ್ಪತ್ರೆಗೆ ಹಣವಂತರು ಮತ್ತು ರಾಜಕಾರಣಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ ಎಂದರೆ ತಿಳಿದಿಕೊಳ್ಳಿ ಎಂಥಹ ಕಾರ್ಯವನ್ನು ಮಾಡಿದ್ದಾರೆ ಎಂದು! ವಿಶ್ವದರ್ಜೆಯ ಚಿಕಿತ್ಸೆ ಜಯದೇವದಲ್ಲಿ ದೊರೆಯುದಕ್ಕೆ ಮಂಜುನಾಥವರೇ ಕಾರಣ ಎಂದು ಅಲ್ಲಿನ ಸಿಬ್ಬಂದಿ ಹೆಮ್ಮೆಯಿಂದ ಹೇಳುತ್ತಾರೆ. ಧರ್ಮ , ಜಾತಿ , ಭಾಷೆ ಮೀರಿ ರೋಗಿಗಳ ಆರೈಕೆ ಮಾಡಿ ಸೈ ಎನಿಸಿಕೊಂಡಿದ್ದಾರೆ . ಇವರು ಮಾಡುವ ಕೆಲಸಕ್ಕೆ ಅನೇಕ ದಾನಿಗಳು ಕೈಜೋಡಿಸಿದ್ದು ನಮ್ಮ ಸುದೈವ! ಜಯದೇವ ಆಸ್ಪತ್ರೆ ಬೆಂಗಳೂರಿನ ಯಾವದೇ ಪ್ರತಿಷ್ಠಿತ ಆಸ್ಪತ್ರೆಗೆ ತಾಳೆ ಮಾಡಿದಾಗ ಒಂದೇ ಒಂದು ದೊಡ್ಡ ವ್ಯತ್ಯಾಸ ಎಂದರೆ “ಬಡವರಿಗೂ ಸಹಿತ ಚಿಕಿತ್ಸೆ ಕೊಡುವ ದವಾಖಾನೆ”. ಅಮೇರಿಕಾದ ಪ್ರಜೆ ಬೆಂಗಳೂರಿಗೆ ಬಂದಾಗ , ಹೃದಯದ ಸಮಸ್ಯೆ ಆದಾಗ , ಜಯದೇವ ಸಂಸ್ಥೆ ಅವನಿಗೆ ಆರೈಕೆ ಮಾಡಿದ್ದರು , ಅದಕ್ಕಾಗಿ ಕೊಟ್ಟ ಬಿಲ್ಲನ್ನು ನೋಡಿ ಅಚ್ಚರಿವ್ಯಕ್ತಪಡಿಸಿದ್ದರು. ಇಷ್ಟು ಹಣ ನಾವು ಅಮೇರಿಕಾದಲ್ಲಿ ಮಾಮೂಲ ಜ್ವರ ಬಂದು ಅಡ್ಮಿಟ್ ಆದಾಗ ಕೊಡುತ್ತೇವೆ. ನಮ್ಮಲ್ಲೂ ಅನೇಕ ಸಂಸ್ಥೆಗಳು ಹಣವನ್ನು ಹಿರಿ ಹಿಂಡಿ ಹಿಪ್ಪಿ ಮಾಡುತ್ತವೆ. ಆದರೆ ಜಯದೇವ ಆಸ್ಪತರೇನೇ ಬೇರೆ! ಇದರ ಅರ್ಥ ಜಯದೇವ ಸಂಸ್ಥೆ ಬಡವರಿಗಾಗಿ ಕಟ್ಟಿದ ಉನ್ನತ ಶ್ರೇಣಿಯ ಆಸ್ಪತ್ರೆ! ಇವರ ಅಧಿಕಾರಾವಧಿಯಲ್ಲಿ ಯಾವದೇ ರೋಗಿ ಹಣವಿಲ್ಲದೆ ಮರಳಿ ಹೋಗಿದ್ದು ಉಧಾಹರಣೆವಿಲ್ಲ. ಇದು ಕೇವಲ ಸ್ಯಾಂಪಲ್! ಇವರ ಅನೇಕ ಸಾಧನಗಳು ಜಗತ್ತೇ ಹೆಮ್ಮೆಯಿಂದ ಹೊಗಳುತ್ತದೆ.
ವ್ಯಯಕ್ತಿಕವಾಗಿ ನಾನು ಅನೇಕ ಬಾರಿ ಜಯದೇವ ಆಸ್ಪತ್ರೆಗೆ ಹೋಗಿದ್ದೇನೆ, ಪ್ರತಿ ಬಾರಿ ಹೋದಾಗ ಹೊಸದಾಗಿ ಒಂದಾದರೂ ಅಭಿವೃದ್ಧಿ ನೋಡಿದ್ದೇನೆ. ಮತ್ತು ಏನಾದರೂ ಸಮಸ್ಸ್ಯೆಗಳು ಇದ್ದರೇ ಮುಂದೆ ನಿಂತು ತ್ವರಿತವಾಗಿ ಬಗೆಹರಿಸಿದ್ದು ಇದೆ. ೨೦೧೫ರಲ್ಲಿ ರಿಪೋರ್ಟ್ ಕಲೆಕ್ಟ್ ಮಾಡುವಾಗ ಒಂದಿಷ್ಟು ಸಮಸ್ಸ್ಯೆ ಇತ್ತು. ನಾನು ಅವರ ಗಮನಕ್ಕೆ ತಂದಾಗ ಅದನ್ನು ಸಂಪೂರ್ಣವಾಗಿ ಬಗೆಹರಿಸಿದ್ದರು. ಅದರ ಸಂಭಾಷಣೆ ಇದರ ಜೊತೆ ಲಗತ್ತಿಸಿದ್ದೇನೆ!
ರಾಜಕೀಯ ನಾಯಕರ ಅಭಿಪ್ರಾಯ!
ಲೋಕಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನದಂದು , ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಂಗ್ರೆಸ್ನವರಿಗೆ , ದಯವಿಟ್ಟು ನಿಮ್ಮ ಅಭ್ಯರ್ಥಿಯನ್ನು ಚುನಾವಣೆ ಕಣದಿಂದ ಹಿಂದಕ್ಕೆ ಕರೆಯಿಸಿಕೊಂಡು ವೈದ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸಿಕೊಂಡು ಎಂದಿದ್ದು ಮಂಜುನಾಥರವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಯಾವದೇ ನಾಯಕರನ್ನು ಕೇಳಿದರೂ ಮಂಜುನಾಥರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಇವರ ಪ್ರಚಾರಕ್ಕೆ ಸ್ವಯಂ ಪ್ರೇರಿತವಾಗಿ ಜನ ಬರುತ್ತಿರುವದನ್ನು ನೋಡಿ ಬೆಂಗಳೂರಿನ ದಕ್ಷಿಣ ಕ್ಷೇತ್ರದ ಶಾಸಕರಾದ ಕೃಷ್ಣಪ್ಪ ಹೇಳಿದ್ದು “ನಾನು ನನ್ನ ಪ್ರಚಾರಕ್ಕೆ ಬರುತ್ತಿದ್ದಾಗ ಕೇವಲ ನೂರಾರು ಜನ ಬರುತ್ತಿದ್ದಿರಿ ಅದೇ ಡಾಕ್ಟರ್ ಬಂದ್ರೆ ಸಂಖ್ಯೆ ದ್ವಿಗುಣವಾಗಿದೆ ನೋಡಿ ಎಂದು ಹೇಳುತ್ತಿದ್ದಾರೆ”
ಮಂಜುನಾಥರ ಜೀವನ ಮತ್ತು ಸಾಧನೆಗಳು!
ಕರ್ನಾಟಕ ದಕ್ಷಿಣ ಭಾರತೀಯ ರಾಜ್ಯದ ಹಾಸನ ಜಿಲ್ಲೆಯಲ್ಲಿ ನಂಜಪ್ಪ ಗೌಡರಿಗೆ ಜನಿಸಿದ ಡಾ. ಮಂಜುನಾಥ್ರು ಮೈಸೂರು ವೈದ್ಯಕೀಯ ಕಾಲೇಜಿನಿಂದ ಡಾಕ್ಟರೇಟ್ ಪಡೆದರು. ಅವರು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ತಮ್ಮ ಎಂ.ಡಿ ಪಡೆದರು ಮತ್ತು ಕಾಸ್ತೂರ್ಬಾ ವೈದ್ಯಕೀಯ ಕಾಲೇಜಿನಿಂದ ಕಾರ್ಡಿಯೋಲಾಜಿಯಲ್ಲಿ ಡಿಎಂ ಪಡೆದರು. ೧೯೮೨ರಲ್ಲಿ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಅಂತರ್ನಿರ್ವಾಹಕರಾಗಿ ಕೆಲಸ ಆರಂಭಿಸಿ, ೧೯೮೫ರಲ್ಲಿ ಸೀನಿಯರ್ ರೆಜಿಸ್ಟ್ರಾರ್ಗಳಾಗಿ ಕಾರ್ಡಿಯೋಲಾಜಿ ವಿಭಾಗದಲ್ಲಿ ಮಂಗಳೂರಿಗೆ ಬಂದರು. ೧೯೮೮ರಲ್ಲಿ ಅವರು ಶ್ರೀ ಜಯದೇವ ಹೃದಯಾಂತ್ರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಎಡಿಕಲ್ಲಿಯಾಗಿ ಸೇರಿ, ೨೦೦೬ರಲ್ಲಿ ಆ ಸಂಸ್ಥೆಯ ನಿರ್ದೇಶಕನಾಗಿ ನೇಮಕಗೊಂಡರು.
ಡಾ. ಮಂಜುನಾಥ್ರು ಹೊಸ ಬೇಲೂನ್ ಮಿಟ್ರಲ್ ವಾಲ್ವುಲೋಪ್ಲಾಸ್ಟಿಯ ಹೊಸ ಪ್ರವಾಹದ ಆವಿಷ್ಕಾರಕರಾಗಿದ್ದಾರೆ ಎಂದು ಹೇಳಲಾಗಿದೆ. ಅವರ ಸಂಶೋಧನೆಗಳು ಸಹಾಯಕ ಪರಿಶೀಲನೆಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜರ್ನಲ್ಗಳಲ್ಲಿ ಬರೆಯಲ್ಪಟ್ಟಿವೆ; ಪಬ್ಮೆಡ್, ಔಷಧಿಗಳ ಡೇಟಾವನ್ನು ಆನ್ಲೈನ್ನಲ್ಲಿ ಸಂಗ್ರಹಿಸುವ ಗುಲಾಬಿ ಪಟ್ಟಿಯಲ್ಲಿ ಅವರ ಲೇಖನಗಳಲ್ಲಿ ೭೩ ಬರೆದುಕೊಳ್ಳಲಾಗಿದೆ. ಅವರು ೨೬,೦೦೦ ಅಂತರ್ವಾಹಕ ಕಾರ್ಯಗಳನ್ನು ನಡೆಸಿದ್ದಾರೆ ಮತ್ತು ಭಾರತದಲ್ಲಿ ಅಕ್ಯುರ ಬೇಲೂನ್ ಕ್ಯಾಥೆಟರ್ ಬಳಸಿದ ಅತ್ಯಂತ ಸಂಖ್ಯೆಯ ಬೇಲೂನ್ ಮಿಟ್ರಲ್ ವಾಲ್ವುಲೋಪ್ಲಾಸ್ಟಿಯ ಅನುಭವಿಯಾಗಿದ್ದಾರೆ. ಅವರು ಮಲ್ಲಿಗೆ ಮೆಡಿಕಲ್ ಸೆಂಟರ್ನಲ್ಲಿ ಸಂಶೋಧಕರಾಗಿ ಸಹ ಸದಸ್ಯರು ಮತ್ತು ಭಾರತೀಯ ವೈದ್ಯರ ಸಂಘದ ಸದಸ್ಯರಾಗಿದ್ದಾರೆ. ಅವರು ಭಾರತೀಯ ಕಾರ್ಡಿಯೋಲಾಜಿ ಕಾಲೇಜಿನ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ಸರ್ಕಾರದಿಂದ 1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯಿಂದ ಸನ್ಮಾನಿತರಾಗಿದ್ದಾರೆ ಮತ್ತು ೨೦೦೭ರಲ್ಲಿ ಭಾರತೀಯ ನಾಗರಿಕತ್ವದ ನಾಲ್ಕನೇ ಉಚ್ಚತಮ ಪ್ರಶಸ್ತಿಯನ್ನು ಪಡೆದಿದ್ದಾರೆ. ೨೦೧೨ರಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು (ಆರ್ಜಿಯೂಎಚ್ಎಸ್) ಅವರನ್ನು ಡಾಕ್ಟರ್ ಆಫ್ ಸೈನ್ಸ್ (ಹೊನೊರಿಸ್ ಕಾಜಾ) ಹೊರತುಪಡಿಸಿದೆ.
ಭಾರತದ ಪ್ರತಿಷ್ಠಿತ ಪದ್ಮ ಶ್ರೀ ಪ್ರಶಸ್ತಿಯನ್ನು 2007ರಲ್ಲಿ ಭಾರತೀಯ ವೈದ್ಯಕೀಯದಲ್ಲಿ ಮಾಡಿದ ಕಾರ್ಯಗಳಿಗೆ ಪ್ರಶಸ್ತಿ ಸ್ವೀಕರಿಸಿದ್ದಾರೆ. 2020ರ 17ರ ಅಕ್ಟೋಬರ್ನಲ್ಲಿ ಕೋವಿಡ್-19 ಪಾಂಡೆಮಿಕ್ನಲ್ಲಿ ಕೋರೋನಾ ವಾರಿಯರ್ಗಳ ಮೇಲೆ ಗೌರವ ಸೂಚಿಸಿಕೊಂಡು, ಮೈಸೂರು ದಸರಾದ ನಾಡಹಬ್ಬ ಉದ್ಘಾಟಿಸಿದರು. ಅವರು 1998ರ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದವರು, ಇದು ಕರ್ನಾಟಕ ಸರ್ಕಾರದ ಎರಡನೇ ಉಚ್ಚ ನಾಗರಿಕ ಪ್ರಶಸ್ತಿ.
ಚುನಾವಣೆ ಗೆಲುವಿನ ನಿರೀಕ್ಷೆಯಲ್ಲಿ!
ರಾಜಕೀಯ ಪ್ರವೇಶ ಆಕಸ್ಮಿಕವಾಗಿದ್ದರೂ , ರಾಜಕೀಯ ಅಧಿಕಾರ ಮೂಲಕ ಇನ್ನಷ್ಟು ಜನರ ಸೇವೆ ಮಾಡುವ ತುಡಿತ ಮತ್ತು ಯೋಜೆನೆ ಖಂಡಿತ ಇದೆ. ಪ್ರಾಮಾಣಿಕ, ಬದ್ಧತೆಯುಳ್ಳ ನಾಯಕನಿಗೆ ಕ್ಷೇತ್ರ ಯಾವದಿದ್ದರೂ ಅವನು ತನ್ನ ಕನಸನ್ನು ನನಸು ಮಾಡಿ ಸಮಾಜಕ್ಕೆ ಕೊಡುಗೆ ಕೊಡುವದಕ್ಕೆ ಯಾವದೇ ತಾಪತ್ರಯ ಕಾಣುವದಿಲ್ಲ. ರಾಜಕೀಯ ಧುಮುಕುವ ಮುಂಚೆ ನಿಧಾನವಾಗಿ ಎಲ್ಲವನ್ನು ಕೂಲಂಕುಷವಾಗಿ ಅಳೆದುತೂಗಿ ವಿಚಾರ ಮಾಡಿ ಸ್ವಆಸಕ್ತಿಯಿಂದ ರಾಜಕೀಯಕ್ಕೆ ಬಂದಿದ್ದಾರೆ. ಅವರ ನಿಶ್ವಾರ್ಥ್ ಸೇವೆಗಾಗಿ ಜನರ ಕೈಹಿಡಿದರೆ ಖಂಡಿತ ನಮ್ಮ ರಾಜ್ಯದ ನಾಯಕ ಒಂದು ಒಳ್ಳೆಯ ಸ್ಥಾನದ ಮೂಲಕ ನಮ್ಮ ರಾಜ್ಯಕ್ಕೆ ಕೊಡುಗೆಯನ್ನು ಕೊಡುತ್ತಾರೆ. ಆದರೆ ಸೋಲು ಮತ್ತು ಗೆಲವು ನಿರ್ಧರಿಸುವರು ಕ್ಷೇತ್ರದ ಜನತೆ!
Categories: Articles