![](https://janaravaani.com/wp-content/uploads/2024/06/b1c5b-vinod.png)
By ವಿನೋದ ಶಾಹಾಪೂರ
(ಹಡಲಸಂಗ)
ಇಂಡಿ ತಾಲೂಕಿನ ಹೆಮ್ಮೆ “ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ” ಅವರು ಮೇ 2023 ರ ಚುಣಾವಣೆ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ನೀಡಿದ ಅತೀ ಮೂರು ಮುಖ್ಯ ಭರವಸೆಗಳಲ್ಲಿ. ಎರಡು ಭರವಸೆಗಳನ್ನು ಈಡೇರಿಸುವತ್ತ ದಿಟ್ಟ ಹಾಗೂ ಪ್ರಾಮಾಣಿಕಹೆಜ್ಜೆಗಳನ್ನಿರಿಸಿದ್ದಾರೆ. ಅವರು ನೀಡಿರುವ ಮೊದಲನೇಯ ಭರವಸೆ ಇಂಡಿಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡುವುದು. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಮತ್ತೋಮ್ಮೆಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದು, ಸರಕಾರಕ್ಕೆಒತ್ತಾಯಿಸಿದ್ದಾರೆ. ಅತೀ ಹಿಂದುಳಿದ ತಾಲೂಕುಗಳಲ್ಲಿ ಒಂದಾದ ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಇಂಡಿ,ಚಡಚಣ, ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ತಾಲೂಕುಗಳನ್ನೋಳಗೊಂಡ ಜಿಲ್ಲೆಯನ್ನಾಗಿ ಮಾಡಬೇಕು ಹಾಗೂ ಆರ್ಟಿಕಲ್ 371 ಜೆ ಗೆ ಸೇರಿಸಿ ಈ ಭಾಗದ ಜನರ ಅಭಿವೃದ್ದಿಗೆ ಸಹಕಾರಿಯಾಗುವಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿರುತ್ತಾರೆ.
![](https://janaravaani.com/wp-content/uploads/2024/06/c4e2d-yp2.png)
ಬರಗಾಲದ ಹಣೆಪಟ್ಟಿಯನ್ನು ಕಟ್ಟಿಕೊಂಡು ಹುಟ್ಟಿರುವ ಇಂಡಿ ತಾಲೂಕಿನ ಜನರ ನೀರಿನ ದಾಹವನ್ನು ನೀಗಿಸಲು ದೇವರು ಈ ಕ್ಷೇತ್ರದ ಜನರ ಪಾಲಿಗೆ. “ಭಗೀರಥ” ನಾಗಿ ಕೊಡುಗೆ ನೀಡಿದ್ದಾರೆ, ಎಂದು ಅನೇಕ ಜನರು ಅಭಿಪ್ರಾಯ ಪಡುತ್ತಿದ್ದಾರೆ. ಏಕೆಂದರೆ, 2023 ಚುಣಾವಣೆಯಲ್ಲಿ 3 ನೇ ಬಾರಿಗೆ ಶಾಸಕರಾದ ಹೋಸ್ತಿಲಲ್ಲಿ ಬರಗಾಲದ ಪರಸ್ಥಿತಿಯ ಹಿನ್ನಲೆಯಲ್ಲಿ ಕ್ಷೇತ್ರದ ಜನಜಾನುವಾರಗಳಿಗೆ ಕುಡಿಯಲು ನೀರಿಲ್ಲದ ಸಂದಿಗ್ಧ ಪರಸ್ಥಿತಿಯಲ್ಲಿ “ಜನರಿಗೆ ನೀರು ಕೊಡಿಸಲು ಸಾಧ್ಯವಾಗದೇ ಇದ್ದರೆ ಈ ಅಧಿಕಾರ ಯಾವ ಪುರಷಾರ್ಥಕ್ಕೆ, ಇಂತಹ ಅಧಿಕಾರದ ಆಸೆ ನನಗಿಲ್ಲ” ಎಂದು ರಾಜೀನಾಮೆಗೆ ಮುಂದಾಗಿ, ಸರಕಾರದ ಕಣ್ಣು ತೆರೆಸಿ, ಜಿಲ್ಲಾಡಳಿತದಿಂದ ಇಂಡಿ ಭಾಗದ ಕೊನೆಯವರೆಗೂ ಕಾಲುವೆ ನೀರನ್ನು ಹರಿಸಿ ಬರಗಾಲದ ಬಡತನವನ್ನು ನೀಗಿಸುವತ್ತ ದಿಟ್ಟ ಹೆಜ್ಜೆ ಹಾಕಿರುವುದು ಖಂಡಿತವಾಗಿಯೂ ಶ್ಲಾಘನೀಯ ಸಂಗತಿ.
ಶಾಸಕರ ಒತ್ತಾಯದಿಂದ ಈ ಕ್ಷೇತ್ರದ ಎಷ್ಟೂ ಜನರು ಹಾಗೂ ಸಂಘ ಸಂಸ್ಥೆಗಳು ಪ್ರೇರಣೆಹೊಂದಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿರುತ್ತಾರೆ. ಕೆಲವೇ ವರ್ಷಗಳಲ್ಲಿ ಈ ಭಾಗದ ಜನರ ಅಭಿವೃದ್ದಿಯ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿವೆ .
ಅವರು ನೀಡಿರುವ ಎರಡನೇಯ ಭರವಸೆ, ರೇವಣಸಿದ್ದೇಶ್ವರ ಏತ ನೀರಾವರಿ ಮೂಲಕ ಅನೇಕ ಹಳ್ಳಿಗಳ ಲಕ್ಷಾಂತರ ಎಕರೆ. ಜಮೀನಿಗೆ ನೀರು ಒದಗಿಸಲು ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ನೀರಾವರಿ ಕಾಮಗಾರಿ ಅತೀ ವೇಗವಾಗಿ ನಡೆಯುತ್ತಿದೆ. ಕೆಲವೇ ವರ್ಷಗಳಲ್ಲಿ ರೈತರ ಬಾಳನ್ನು ಹಸನಾಗಿಸಲು ಕಾಲುವೆಗಳು ಸಿದ್ದವಾಗಲಿವೆ. ಈ ಯೋಜನೆಯಿಂದ ಇಂಡಿ ಕ್ಷೇತ್ರದ 32 ಹಳ್ಳಿಗಳ 21,500 ಹೆಕ್ಡೇರ, ನಾಗಠಾಣ ಕ್ಷೇತ್ರದ 10 ಹಳ್ಳಿಗಳ 6,500 ಹೆಕ್ಟೇರ ಪ್ರದೇಶ ನೀರಾವರಿಯಾಗಲಿದೆ.
ಈ ಭಾಗದ ರೈತಾಪಿ ವರ್ಗದ ಜನರಿಗೆ ಈ ಯೋಜನೆಯ ಬಗ್ಗೆ ಸಮಯಕ್ಕೆ ಸರಿಯಾಗಿ ಮಾಹಿತಿ ಸಿಗುವಂತೆ ಅನುಕೂಲವಾಗುವ ದೃಷ್ಠಿಯಿಂದ ಹೋರ್ತಿ ಗ್ರಾಮದಲ್ಲಿ ನೀರಾವರಿ ಇಲಾಖೆಯ ಕಛೇರಿಯನ್ನು ಸ್ಥಾಪಿಸಿದ ಶ್ರೇಯ ಈ ಜನನಾಯಕನಿಗೆ ಸಲ್ಲುತ್ತದೆ. ವಿಷೇಶವಾಗಿ ರೇವಣಸಿದ್ದೇಶ್ವರ ಏತ ನೀರಾವರಿ ಕಾಮಗಾರಿ ಆದಷ್ಟು ಬೇಗ ಮುಕ್ತಾಯಗೊಳಿಸಲು ಸ್ವತಃ ಕಾಮಗಾರಿ ಪರಿಶೀಲಿಸುವುದು, ಕಾಮಗಾರಿ ವೇಗ ಪಡೆದುಕೋಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದು, ಮಾರ್ಗದರ್ಶನ ನೀಡುವುದು, ಅಧಿಕಾರಿಗಳ ಕೈ ಬಲಪಡಿಸಿ ಅವರ ಜೊತೆ ಕೆಲಸ ಮಾಡುತ್ತಿರುವುದು ಈ ಕ್ಷೇತ್ರದ ಜನರ ಸಂತಸಕ್ಕೆ ಕಾರಣೀಕರ್ತರಾಗಿದ್ದಾರೆ.
![](https://janaravaani.com/wp-content/uploads/2024/06/cef24-yp3.png)
ಅವರು ಜನರಿಗೆ ನೀಡಿರುವ ೩ ಭರವಸೆಗಳಲ್ಲಿ 2 ಭರವಸೆಗಳು ಪ್ರಗತಿಯಲ್ಲಿದ್ದು ಕೆಲವೇ ವರ್ಷಗಳಲ್ಲಿ ಜನರಿಗೆ ಕೊಡುಗೆಯಾಗಿ ನೀಡಲು ನಮ್ಮ ಹೆಮ್ಮೆಯ ಶಾಸಕರು ಉತ್ಪುಕರಾಗಿದ್ದಾರೆ. ಇಂಡಿ ನಗರದ ೨೪ ಘಂಟೆ ನೀರು ಕೊಡುತ್ತವೆ ಎಂದು ಅನೇಕ ಶಾಸಕರು ಹೇಳಿದ್ದರು, ೫೦ ವರ್ಷ ಅದು ಭರವಸೆ ಆಗೇ ಉಳಿದಿತ್ತು ಆದರೆ ಮೊದಲನೇ ಬಾರಿ ಶಾಸಕರಾದಾಗ ಇಂಡಿ ಪಟ್ಟಣಕ್ಕೆ ನೀರು ಕೊಟ್ಟಿದ್ದು ಇವರೇ ಎನ್ನವುದು ಅವರ ಸಾಧನೆಗೆ ಸಾಕ್ಷಿ! ಮರಗೂರಿನ ಭೀಮಾಶಂಕರ ಶುಗರ್ ಖಾರ್ಕಾನೆ ಯಾವದೇ ಜನ್ಮದಲ್ಲೂ ಪ್ರಾರಂಭವಾಗಲಾರದು ಎಂದು ಅನೇಕ ಜನರು ಹೇಳಿದ್ದು ಕೇಳಿದ್ದೇವೆ. ಆದರೆ ಜನರಿಗೆ ಕೊಟ್ಟ ಮಾತಿನಂತೆ ಕಠಿಣ ಕೆಲಸವಾದ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದ್ದು ಅವರ ಬದ್ಧತೆ ತೋರಿಸುತ್ತದೆ.
ವಿಶೇಷ ವ್ಯಕ್ತಿತ್ವದ ಸಜ್ಜನ ರಾಜಕಾರಣಿ.
ಸುಮಾರು 30 ವರ್ಷಗಳಿಂದ ಜನರ ಪ್ರತಿನಿಧಿಯಾಗಿ, ಜಿಲ್ಲಾ ಪಂಚಾಯತ ಸದಸ್ಯರಾಗಿ, ವಿರೋದ ಪಕ್ಷ ನಾಯಕರಾಗಿ, ಅಧ್ಯಕ್ಷರಾಗಿ, 2013 ರಿಂದ ವಿಧಾನ ಸಭೆಯ ಸದಸ್ಯರಾಗಿ 2023 ರಲ್ಲಿ ಸತತ ಮೂರನೇ ಬಾರಿಗೆ ಶಾಸಕರಾಗಿರುವ ಇವರನ್ನು ಮಂತ್ರಿಯನ್ನಾಗಿ ನೋಡಲು ಅನೇಕ ಕಾರ್ಯಕರ್ತರು, ಅಭಿಮಾನಿಗಳು ತುದಿಗಾಲಿನಲ್ಲಿ ಕಾತುರದಿಂದ ಕಾಯುತ್ತಿದ್ದಾರೆ. ಅನೇಕ ಅಭಿಮಾನಿಗಳು, ನಮ್ಮ ಕ್ಷೇತ್ರಕ್ಕೆ ಮಂತ್ರಿಯ ಪ್ರಾತಿನಿಧ್ಯವನ್ನು ದೊರಕಿಸಿಕೊಂಡುವಂತೆ ಮುಖ್ಯಮಂತ್ರಿಗಳಿಗೆ, ವರಿಷ್ಠರಿಗೆ ಮನವಿಯನ್ನು ಮಾಡುತ್ತೇವೆ, ಉಗ್ರ ಹೋರಾಟ ಮಾಡುತ್ತೇವೆ. ಎಂದು ಕೇಳಿದಾಗ ಅವರು ಎಷ್ಟು ನಮ್ಮತೆಯಿಂದ ಉತ್ತರ ನೀಡುತ್ತಾರೆ ಎಂದರೆ “ಅದು ನಮ್ಮ ಕೆಲಸವಲ್ಲ ಪಕ್ಷ ತಿರ್ಮಾನಿಸುತ್ತದೆ, ಪಕ್ಷಕ್ಕೆ ನಿಷ್ಠಾವಂತನಾಗಿ ವಿಧೇಯನಾಗಿರಬೇಕು. ನಾವು. ಅಭಿವೃದ್ದಿಯ ಕಡೆಗೆ ಗಮನ ಹರಿಸೋಣ, ಜನರ ನೋವಿಗೆ ಸ್ಪಂದಿಸಿ ಅವರ ಬೇಡಿಕೆಗಳನ್ನು ಈಡೇರಿಸೋಣ. ಕ್ಷೇತ್ರ ಅಭೀವೃದ್ದಿಯಾದರೆ ಮಂತ್ರಿಯಾದುದಕ್ಕಿಂತಲೂ ದೊಡ್ಡ ಖುಷಿ ಹಾಗೂ ತತೃಪ್ತಿ ನನಗಾಗಲಿದೆ. ನಾವೆಲ್ಲರೂ ಶಾಂತಿ, ಸುವ್ಯವಸ್ತೆಯಿಂದ ಈ ಕ್ಷೇತ್ರವನ್ನು ಮುನ್ನಡೆಸೋಣ?” ಎಂದು ಕಿವಿ ಮಾತುಹೇಳುತ್ತಾರೆ.
ಅಧಿಕಾರದ ದಾಹ ಇಲ್ಲದೆ ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತ ಸದಾ ಕ್ಷೇತ್ರದ ಒಳತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸರಳ ವ್ಯಕ್ತಿತ್ವದ ಸಜ್ಜನ ರಾಜಕಾರಣಿ ನಮ್ಮ ಕ್ಷೇತ್ರದ ಶಾಸಕರಾಗಿ ಸಿಕ್ಕಿರವುದು ಈ ಭಾಗದ ಜನರ ಪುಣ್ಯವೇ ಹೌದು. ಹಾಗಾಗಿ ಈ ಜನರ ಹೃದಯ ಸಿಂಹಾಸನದಲ್ಲಿ ರಾಜನಾಗಿ ರಾರಾಜಿಸುತ್ತಿದ್ದಾರೆ.
ಈಡೀ ದೇಶದಲ್ಲಿ ಇಂಡಿ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣತೋಟ್ಟಿರುವ ಇವರು “ನಾಳೆ ಒಂದು ದಿನ ನಾವು ಇಹಲೋಕ ತ್ಯಜಿಸುತ್ತೇವೆ ಆದರೆ ನಾವು ಮಾಡಿರುವ ಕೆಲಸಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು” ಎನ್ನುವ ದೂರ ದೃಷ್ಠಿಯುಳ್ಳ ನಾಯಕರು ನಮಗೆ ಸಿಕ್ಕಿರುವುದು ನಮ್ಮ ಎಷ್ಟೋ ಜನ್ಮದ ಪುಣ್ಯ ಅಲ್ಲವೇ?, ಈ ಕ್ಷೇತ್ರ “ಅಭಿವೃದ್ಧಿ” ಎನ್ನುವ ಪದಕ್ಕೇ ಮಾದರಿಯಾಗಲು ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲವರಿಗೆ ಆಜೀವ ಶಾಸಕನ ಸ್ಥಾನವನ್ನು ನೀಡಲು ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನಸ್ಸಿನಲ್ಲಿ ಅಚಲವಾಗಿ, ದೃಢವಾಗಿಸಿಕೊಳ್ಳುವುದು ಅತೀ ಉತ್ತಮವಾದ ಕೆಲಸ ಹಾಗೂ ಕರ್ತವ್ಯವಾಗಿದೆ.
Categories: Articles