By Bhimashankar Teli
ಅರ್ಜುನ ಪಾಶುಪತಾಸ್ತ್ರ ಪಡೆಯಲು ಕಠೋರ ತಪಸ್ಸು ಮಾಡಿ ಶಿವನಿಂದ ಪಾಶುಪತಾಸ್ತ್ರ ಪಡೆದು ಕುರುಕ್ಷೇತ್ರದಲ್ಲಿ ಝೇಂಕರಿಸಿದ್ದು ಕೌರವರ ಜಂಗಾಬಲವೇ ಅಡಗಿಸಿತ್ತು! ಕುರುವಂಶದ ಕುಲಪುತ್ರ ದುರ್ಯೋಧನ ಅಸಾಮಾನ್ಯ ಶೂರ! ಅವರ ಹತ್ತಿರ ಇದ್ದವರು ಗುರು ದ್ರೋಣಾಚಾರ್ಯ, ಕರ್ಣ!, ಇಚ್ಛಾಮರಣಿ , ಗಂಗೆ ಪುತ್ರ , ಪರಶುರಾಮರ ಜೊತೆ ಯುದ್ಧಕ್ಕಿಳಿದ ವೀರ ಮಹಾಮಹಿಮ ಭೀಷ್ಮ! ಕೃಷ್ಣ ಕುರುಕ್ಷೇತ್ರದ ಆಳ ಮೊದಲೇ ಬಲ್ಲವನಾಗಿದ್ದರಿಂದ , ಅರ್ಜುನನನಿಗೆ ನೀನು ಪರಮೇಶ್ವರರ ಪ್ರೀತಿಪಾತ್ರನಾಗಿ ಅವರಿಂದ ವರದಾನ ಪಡೆದುಕೊಳ್ಳು ಹೇಳಿದರಿಂದ ಅರ್ಜುನ ಕಠಿಣ ತಪಸ್ಸು ಮಾಡಿ ಪಾಶುಪತಾಸ್ತ್ರ ಪಡೆದು ಕುರುಕ್ಷೇತ್ರದಲ್ಲಿ ಜಯದ್ರಥನ ವದೆ ಮಾಡಿದ್ದು ಅರ್ಜುನನ ಭುಜಬಲದ ಪರಾಕ್ರಮ!
ನಮ್ಮ ಶಾಲೆ ಕನ್ನಡ ಮಾಧ್ಯಮಿಕ ಶಾಲೆ ನಂಬರ್ ೨೪, ಅಲ್ಲಿರುವುದು ೮,೯ ಮತ್ತು ೧೦ನೇ ವರ್ಗಗಳು. ನನ್ನ ಹೆಸರು ಹೇಮಾ , ಅವರ ಹೆಸರು ಶಿವಾ! ನನಗೆ ಕೆಲವೊಂದು ಸಾರಿ ಅನಿಸಿದ್ದು, ಅರ್ಜುನನು ಶಿವಾ ಎಂದು ಕರೆದಾಗ ಶಿವ ಪ್ರತ್ಯಕ್ಷನಾಗಿ ಪಾಶುಪತಾಸ್ತ್ರ ಕೊಟ್ಟ ಹಾಗೆ ನನಗೇಕೆ ನನ್ನ ಶಿವ ಪ್ರತ್ಯಕ್ಷ ಆಗುವದಿಲ್ಲ ಎಂದು ಅನಿಸಿ ಬೇಜಾರು ಆಗುತ್ತಿತ್ತು! ಮತ್ತೆ ಮನಸ್ಸಿಗೆ ಮುದ ತರಿಸುವ ವಿಷಯದಲ್ಲಿ ಮುಳಗಿಸಿ ವಿಷಯಾಂತರವು ಮಾಡಿದ್ದುಇದೆ.
ಸ್ವಯಂವರದಲ್ಲಿ ಶಿವ ಭಾಗವಹಿಸಿ , ನನ್ನ ಶಿವ ಧನಸ್ಸು ಎತ್ತಿ ಎಲ್ಲರ ಮುಂದೆ ಧನಸ್ಸಿಗೆ ದಾರವನ್ನು ಬಿಗಿದು ಟೆಂಕರಿಸಿ ಗೆದ್ದು ನನ್ನನ್ನೇಕೆ ತನ್ನ ಮಡಲಿಗೆ ಹಾಕಿಕೊಳ್ಳಬಾರದು? ಅಂದು ಅರ್ಜುನ ಪಾಂಚಾಲ ರಾಜ್ಯದಲ್ಲಿ ದ್ರುಪದ ರಾಜನ ಸ್ವಯಂವರದಲ್ಲಿ ಭಾಗವಹಿಸಿ , ಧನಸ್ಸನ್ನು ಎತ್ತಿ ಎಲ್ಲರ ಮುಂದೆ ದ್ರೌಪದಿಯನ್ನು ಮದುವೆ ಮಾಡಿಕೊಂಡ ಹಾಗೆ ನನ್ನ ಶಿವ ನನಗೆ ಮದುವೆ ಮಾಡಿ ಕೊಳ್ಳಬಹುದೇ?
ಮುಂಗಾರಿನ ಮಳೆ ಯಾರಿಗೆ ಮುದಕೊಡುವದಿಲ್ಲ ಹೇಳಿ? ಹೆಣ್ಣಿನ ಸೌಂದರ್ಯ ಅವಳ ತೊಡುವ ಆಭರಣಗಳಲ್ಲಿ ಇಲ್ಲ , ಅವಳು ತೊಡುವ ರಿಯಾಯಿತಿ ದರದಲ್ಲಿ ಕೊಂಡುಕೊಂಡ ಸೀರೆಯಲ್ಲಿಇರುವದಿಲ್ಲ! ಅವಳ ಸೌಂದರ್ಯ ಇರುವುದು ಅವಳ ಅಂತರಾಳದ ವಿಶಾಲವಾದ ಮನೋಭಾವದಲ್ಲಿ. ಅಂತಹ ಮನೋಭಾವ ಅವಳನ್ನು ಕಂಗೊಳಿಸುವಂತೆ ಮಾಡುತ್ತದೆ. ಹಾಗೆ ಈ ಮುಂಗಾರಿನ ಮಳೆ ಪ್ರಾರಂಭವಾದ ಒಂದು ವಾರಕ್ಕೆ ಪ್ರಕೃತಿಯ ಸೌಂದರ್ಯ ನೋಡುವುದೇ ಒಂದು ಹಬ್ಬ. ವಿಶಾಲವಾದ ಪ್ರಾಂಗಣ , ಕೈಯಲ್ಲಿ ಒಂದು ಕಾಫಿ ಮಗ್, ಜಿಟಿ ಜಿಟಿ ಮಳೆ, ಹಸಿರಾದ ಪ್ರಕೃತಿ, ಯಜಮಾನರು ಕಂಪ್ಯೂಟರಿನ ಮುಂದೆ ಕೋಡಿಂಗ್ ಮಾಡುತ್ತಾ ಕುಳಿತ್ತಿದ್ದಾರೆ, ನಾನೊಬ್ಬಳೇ ಬಾಲ್ಕನಿಯಲ್ಲಿ! ಎಲ್ಲ ನೆನಪುಗಳಿಗೆ ಗೊಬ್ಬರ ಹಾಕಿ ಹುಚ್ಚೆದ್ದು ಕುಣಿಯುವಂತೆ ಮಾಡುವ ಶಕ್ತಿ ಬಾಲ್ಕನಿಯೆಲ್ಲೇ ಇರುವುದು!
ಅಂದು ನಮ್ಮ ಶಾಲೆಯಲ್ಲಿ ಪ್ರಭಂದ ಸ್ಪರ್ಧೆ ಏರ್ಪಡಿಸಿದ್ದರು. ನಮ್ಮ ಶಾಲೆಯಲ್ಲಿ ಇದೊಂದು ಹೊಸ ವಿಚಾರವಾಗಿತ್ತು. ಸಾಮಾನ್ಯವಾಗಿ ಪ್ರಬಂಧವೆಂದರೆ, ಒಂದು ವಿಷಯ ಕೊಟ್ಟು, ಅದರ ಬಗ್ಗೆ ಪರೀಕ್ಷೆ ಇಡುವುದು ಸಾಮಾನ್ಯ! ಆದರೆ ನಮ್ಮ ಪ್ರಭಂದ ಸ್ಪರ್ಧೆ ಹೊಸತನದಿಂದ ಕೂಡಿತ್ತು. ಪ್ರಬಂಧದ ವಿಷಯ ಮಹಾಭಾರತ ಪಾತ್ರಧಾರಿಗಳ ಬಗ್ಗೆ ಪ್ರಬಂಧ ಬರೆದು ಅದನ್ನು ನಾಟಕ ರೂಪದಲ್ಲಿ ಮಾಡುವುದು. ಮೊದಲು ಇಬ್ಬರು ಇರುವ ತಂಡಗಳನ್ನು ರಚನೆ ಮಾಡುವುದು ತದನಂತರ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು.
ಯಜಮಾನರು ಯಾವಾಗಲೂ ಕೆಲಸ ಕೆಲಸ ಅಂತ ತಮ್ಮ ಕೆಲಸದಲ್ಲಿ ತಲ್ಲೀನರಾಗುವುದು ನಮ್ಮ ಮನೆಯಲ್ಲಿ ಸಾಮಾನ್ಯ! ಪ್ಯಾಸ್ಕಲ್ ದಿಂದ ಹಿಡಿದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವರೆಗೆ ಅವರು ನಡೆದುಬಂದ ದಾರಿ! ಕುಟುಂಬಕ್ಕೆ ಸಮಯ ಕೊಟ್ಟಿಲ್ಲ ಎಂದು ಹೇಳುವುದು ತಪ್ಪೆನಿಸುತ್ತದೆ. ಅವರಿಗೆ ಸಮಯ ಸಿಕ್ಕಾಗ ಖಂಡಿತ ನಮಗೆ ಸಮಯ ಸಿಗುತ್ತದೆ. ನಾನು ಕಂಪ್ಯೂಟರ್ ಇಂಜಿನಿಯರ್ ಆಗಿದ್ದರಿಂದ ಅವರ ಕೆಲಸದ ಒತ್ತಡದ ಬಗ್ಗೆ ಅರಿವುಂಟು! ಅಂದಿನ ಶಾಂತಿ ಸಾಗರ, ಗಣೇಶ್ ಜ್ಯೂಸ್, ಪ್ರಸನ್ನ ಥೇಟರ್, ನವರಂಗ್, ಗುರುಸಿದ್ದೇಶ್ವರ ಥೇಟರ್ , ಇಂದಿನ ಮ್ಯಾಕ್ಡಿ , ಇನೊಕ್ಸ್ , ಪಿವಿರ್ , ಥರ್ಡ್ ವೇವ , ಪ್ರಸಿದ್ದವಾದ ಪಬಗಳಿಗೆ ನಮ್ಮ ಬೇಟಿಯಾಗಿದೆ! ಕೆಲಸ ಇದ್ದಾಗ ಕೆಲಸ, ಸಮಯ ಸಿಕ್ಕಾಗ ನಮಗಾಗಿ ಸಮಯವನ್ನು ಕಳೆದಿದ್ದೇವೆ! ಇತ್ತೀಚಿಕೆ ಫಿಟ್ನೆಸ್ ಫ್ರೀಕ್! ಯೋಗ, ವಾಕ್ ಯಜಮಾನರ ಜೊತೆ ನಾನು ಪ್ರಾರಂಭ ಮಾಡಿದ್ದೇನೆ!
ತಂಡಗಳು ರಚನೆ ಮಾಡಲು, ಎಲ್ಲರ ಹೆಸರನ್ನು ಚೀಟಿಯಲ್ಲಿ ಬರೆದು ಒಂದು ಟೇಬಲ್ ಮೇಲೆ ಇಟ್ಟರು. ಮೊದಲಿನ ಎರಡು ಚೀಟಿ ಎತ್ತಿದಾಗ ಬಂದ ಹೆಸರುಗಳು , “ಗುರುರಾಜ್ ಮತ್ತು ಮಲ್ಲಿ” ತದನಂತರ ಮತ್ತೆರಡು ಚೀಟಿಗಳು ಎತ್ತಿದರು “ಮಹಾಂತೇಶ್ ಮತ್ತು ಸುನೀತಾ ” ಹೀಗೆ ತಂಡಗಳನ್ನು ರಚನೆ ಮಾಡುತ್ತಿದ್ದರು, ನಂದು ಯಾವಾಗ ಎಂದು ಎದೆಬಡಿದುಕೊಳ್ಳುತಿತ್ತು , ಕೊನೆಗೆ ನನ್ನ ಹೆಸರು ಬಂದೆ ಬಿಟ್ಟಿತು ಮತ್ತು ನನ್ನ ಜೊತೆ ಒಬ್ಬ ಹುಡುಗ ಬಂದಬಿಟ್ಟ! ಅದೇ ಜೋಡಿ “ಹೇಮಾ ಮತ್ತು ಶಿವಾ”. ಇದೊಂದು ಶಾಲೆಯ ಸ್ಪರ್ಧೆ ಮತ್ತು ಸಾಮಾನ್ಯವಾದ ಪ್ರಕ್ರಿಯೆ! ಇದರ ಜೊತೆ ಪಾತ್ರಗಳನ್ನು ಆಯ್ಕೆ ಮಾಡಿಕೊಂಡೆವು, ನಮ್ಮ ತಂಡಕ್ಕೆ “ಅರ್ಜುನ ಮತ್ತು ದ್ರೌಪದಿ”, ಗುರುರಾಜ್ ತಂಡಕ್ಕೆ ದುರ್ಯೋಧನ ಮತ್ತು ನಕುಲ, ಮಹಾಂತೇಶ್ ತಂಡಕ್ಕೆ ಕರ್ಣ ಮತ್ತು ಸಹದೇವ್ ಹೀಗೆ ಎಲ್ಲರೂ ಮಹಾಭಾರತ ಪಾತ್ರಗಳನ್ನು ಆಯ್ಕೆಮಾಡಿಕೊಂಡರು.
ಯಜಮಾನರು ಯೋಗ ಕೇಂದ್ರಕ್ಕೆ ನೋಂದಣಿ ಮಾಡಿ ಒಂದು ತಿಂಗಳು ಹೋಗಿದ್ದಾಯಿತು, ಸೈಕ್ಲಿಂಗ್ ಮಾಡಬೇಕು ಎಂದು ಸೈಕಲ್ ತಗೆದುಕೊಂಡಾಯಿತು, ಜಿಮ್ ಅಡ್ಮಿಶನ್ ಕೂಡ ಆಯಿತು! ಯಾವದನ್ನು ಒಂದೇ ಪೂರ್ತಿಯಾಗಿ ಹಿಡದೆ ಇಲ್ಲ! ಹೀಗೆ’ಸಾಗುತ್ತಿದೆ ಅವರ ಫಿಟ್ನೆಸ್! ವರ್ಷಕ್ಕೆ ಒಂದು ಬಾರಿ ಬ್ಲಡ್ ಟೆಸ್ಟ್ ಮಾಡಿಕೊಂಡು ಡಿ ವಿಟಮಿನ್, ಬಿ ೧೨ ವಿಟಮಿನ್ ಕಡಿಮೆ ಬಂದಾಗ ಮೊದ ಮೊದಲು ನನಗೆ ದೊಡ್ಡ ರೋಗ ಬಂದಿದೆ ಎಂದು ಗಾಬರಿಗೆ ಬಿದ್ದದ್ದು ಆಗಿದೆ! ಈಗೀಗ ಕೊಲೆಸ್ಟ್ರಾಲ್ ಹೆಚ್ಚಿಗೆ ಬರುತ್ತಿದ್ದರೂ ಬಿಯರ್ ಕುಡಿಯುದು ಕಡಿಮೇನು ಆಗಿಲ್ಲ!
ಪ್ರಭಂದ ಸ್ಪರ್ಧೆಗೆ ಒಂದು ತಿಂಗಳ ತಯಾರಿಮಾಡಿಕೊಳ್ಳುವುದು , ಅದರ ಜೊತೆ ಪ್ರತಿದಿನ ಶಾಲೆಯಲ್ಲಿ ರೆಹೆರ್ಶಲ್ ಮಾಡುವುದು ಸತತವಾಗಿ ನಡೆಯುತಿತ್ತು! ನಾನು ಅರ್ಜುನನ ಬಗ್ಗೆ ಓದುವುದು ಅನಿವಾರ್ಯವಾಗಿತ್ತು. ಮೊದಲು ಮನೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಬಗ್ಗೆ ಕಥೆ ಹೇಳುತ್ತಿದ್ದರು ಆದ್ರೆ ನನಗೆ ಆಸಕ್ತಿನೇ ಇರಲಿಲ್ಲ. ಆದರೆ ಇಂದು ನನಗೆ ಅರ್ಜುನನ ಬಗ್ಗೆ ಓದುತ್ತಿದ್ದಾಗ ರೋಮಾಂಚನ ವಾಗುತಿತ್ತು. ಇಂದ್ರನ ಪುತ್ರ ಮೂರುಲೋಕದ ಗಂಡ ಎಂದು ಅರ್ಜುನನಿಗೆ ಹೇಳುತ್ತಿದ್ದರು. ಶ್ರೇಷ್ಠ ಗಾಂಡೀವಿ, ದ್ರೋಣಾಚಾರ್ಯರ ಅಚ್ಚುಮೆಚ್ಚಿನ ಶಿಷ್ಯ! ಅವೇನೇಷ್ಟು ಶೂರನೆಂದರೆ ಕುರುಕ್ಷೇತ್ರ ಯುದ್ಧದಲ್ಲಿ, ಅರ್ಜುನನ ಕೋಪಕ್ಕೆ ಯಾವ ಯೋಧರು ಸರಿಸಾಟಿ ಇರಲಿಲ್ಲ. ಕೃಷ್ಣನ ಕೃಪಾಶೀರ್ವಾದದ ಜೊತೆ ಅವನ ಶೌರ್ಯ ಇಡೀ ಕುರುವಂಶ ಕೊಂಡಾಡುತ್ತಿತ್ತು. ನನ್ನ ಜೊತೆಗಾರ ಶಿವಾ ಅಗ್ನಿಯಿಂದ ಹುಟ್ಟಿದ ದ್ರುಪದ ರಾಜನ ಮಗಳಾದ ಮತ್ತು ಶಿಖಂಡಿನೀ ತಂಗಿಯಾದ ಪಾಂಚಾಲಿಯ ಬಗ್ಗೆ ಅತ್ತುತ್ತಮವಾಗಿ ಓದಿ ತಯಾರಿ ಮಾಡಿಕೊಂಡಿದ್ದನು.
ಅದೊಂದು ದಿನ ಎಂದಿನಂತೆ ನಮ್ಮ ಸಾಯಂಕಾಲ ರಿಹರ್ಸಲ್ ನಡೆಯುತ್ತಿತ್ತು, ಅರ್ಜುನ ಮತ್ತು ದ್ರೌಪದಿ ಸ್ವಯಂವರ ಸನ್ನಿವೇಶ! ಅಂದು ಸ್ವಯಂ ಶಿವಾ ಅರ್ಜುನನಾಗಿ ಬಂದು ದ್ರೌಪದಿ ಸೌಂದರ್ಯವನ್ನು ವರ್ಣಿಸಿ , ದ್ರೌಪದಿಯ ಬಗ್ಗೆ ಹೇಳುವಾಗ ನನ್ನೆಲ್ಲ ಕಣ್ಣು ಶಿವನೇ ಮೇಲೆ! ಅರ್ಜುನನ ಪಾತ್ರದ ಬಗ್ಗೆ ಗಹನವಾಗಿ ಓದಿದ ನನಗೆ ಶಿವಾ ನನಗೆ ಕಾಣಿಸಲೇ ಇಲ್ಲ. ಎಲ್ಲವೂ ಅರ್ಜುನ ಅರ್ಜುನ ಅರ್ಜುನಮಾಯವಾಗಿತ್ತು! ನಾನು ಅರ್ಜುನ ಹೆಂಡತಿ ದ್ರೌಪದಿ, ಅರ್ಜುನ ನನ್ನ ಗಂಡ ನನ್ನನ್ನು ಹೊಗಳುತ್ತಿದ್ದಾನೆ, ಆ ಸನ್ನಿವೇಶದಲ್ಲಿ ಹೇಮಾ ಮತ್ತು ಶಿವ ನಗಣ್ಯವಾಗಿದ್ದರು . ನನಗೆ ಗೊತ್ತಿಲ್ಲದೇ ಶಿವ ಎಂಬ ಅರ್ಜುನ ಹೇಮಾನ ಜೀವನದಲ್ಲಿ ಗಟ್ಟಿಯಾಗಿಬಿಟ್ಟ.
ಇದೆ ಕಾರಣಕ್ಕೆ ಅನೇಕ ಬಾರಿ ಶಾಲೆಗೆ ರಜೆ ಇದ್ದಾಗ ನನಗೆ ನನ್ನ ಶಿವಾ ಮಹಾಭಾರತದ ಅರ್ಜುನನಾಗಿ ಕಾಡುತ್ತಿದ್ದ. ಸ್ವಯಂವರ , ಅವನ ಶೌರ್ಯ ನೆನಪಾಗುತಿತ್ತು. ನನ್ನ ಶಿವಾನು ಸಹಿತ ಸ್ತುರದ್ರುಪಿ ಮತ್ತು ಶಾಂತಸ್ವಭಾವದ ಗೆಳಯ.
ನಾವು ಹಿಂದಿನ ಸಲ ಚಿಕ್ಕಮಗಳೂರ ಟ್ರಿಪ್ ಹೋದಾಗ ೯ ಕುಟುಂಬ ಹೋಗಿದ್ದೆವು. ಚಿಕ್ಕಮಗಳೂರಿನ ಟ್ರಿಪ್ ತುಂಬಾ ಸೊಗಸಾಗಿತ್ತು. ಅಲ್ಲಿ ಒಟ್ಟು ೨೦ ಜನ ಮಕ್ಕಳು ಸಹಿತ. ಮಕ್ಕಳು ಮಲಗಿದ್ದರು, ನಮ್ಮೆಲ್ಲರ ಯಜಮಾನರು ದುಂಡು(ಗುಂಡು) ಪರಿಷತ್ತಿನಲ್ಲಿ ಭಾಗವಹಿಸಿದ್ದರು. ನಮ್ಮ ಹೆಣ್ಣು ಮಕ್ಕಳ ಗುಂಪು ಮತ್ತೊಂದು ಕಡೆ ಕ್ಯಾಂಪ್ ಫೈರ್! ಅದರಲ್ಲಿ ಮಹಿಳಾ ಗುಂಪಿನಲ್ಲಿ ಕೆಲವರು ಬೀರಬಲ್ ಆಗಿದ್ದರು (ಬೀರು ಕುಡಿದವನೇ ಬೀರಬಲ್).
ಸ್ವಲ್ಪ ಮತ್ತೇರಿದಾಗ ಅವರ ಅವರ ಸವಿನೆನಪುಗಳು ಹೇಳುತ್ತಿದ್ದರು. ನನ್ನ ಟರ್ನ್ ಬಂದಾಗ ನಾನು ನನ್ನ ಶಿವನ ಬಗ್ಗೆ ನೇ ಹೇಳಬೇಕು! ಪ್ರಭಂದದ ಕೊನೆಯ ಹಂತದ ಸ್ಫರ್ಧೆಗಿಂತ ಮುಂಚೆ ನಾವು ಶಾಲೆಯಲ್ಲಿ ಎರಡು ದಿನದ ಮಟ್ಟಿಗೆ ಟ್ರಿಪ್ಗೆ ಹೋಗಿದ್ದೆವು, ಅಲ್ಲಿ ನನಗಾದ ಅನುಭವ ಹೇಳಿದ್ದೆ. ಅರ್ಜುನ ಮತ್ತು ದ್ರೌಪದಿ ಸ್ವಯಂವರ ಆದ ನಂತರ ಹೋಗಿದ್ದ ಟ್ರಿಪ್! ನನ್ನ ಮನದಲ್ಲಿ ಇದ್ದದ್ದು ಬರಿ ಶಿವಾ! ಬಸ್ ಏರಿ ಕುಳಿತಾಗ , ಪಕ್ಕಕ್ಕೆ ಬಂದು ಶಿವಾ ಕುಳಿತುಕೊಳ್ಳಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೆ ಆದರೆ ನಮ್ಮ ಗುರುಗಳ ಒಂದು ಆದೇಶದಿಂದ ಅದು ನೆರವೇರಲಿಲ್ಲ. ಆದೇಶ “ಹೆಣ್ಣುಮಕ್ಕಳು ಒಂದು ಕಡೆ ಗಂಡು ಮಕ್ಕಳು ಇನ್ನೊಂದು ಕಡೆ”:)
ಬಸ್ನಲ್ಲಿ ಹೋಗುವಾಗ ದುರ್ಯೋಧನ ಪಾತ್ರದಾರಿ ಗುರುರಾಜನ ಕಣ್ಣು ನನ್ನ ಮೇಲೇನೆ. ನನ್ನ ಹಿಂದಿನ ಸೀಟ್ ಅವನದೇ ಆಗಿತ್ತು. ಅವನಿಗೆ ಮೊದಲಿನಿಂದಲೂ ನನ್ನ ಮೇಲೆ ಕಣ್ಣು, ಒಂದು ಬಾರಿ ಶಿವನಿಗೆ ಹೇಳಿ ಪಾತ್ರ ಬದಲಿಸುವ ಪ್ರಯತ್ನ ಮಾಡಿದ್ದ. ಆದರೆ ಅವನ ಸ್ವಭಾವ ದುರ್ಯೋಧನ ತರಹ ಇರುವದರಿಂದ ಯಾವತ್ತೂ ಅವನ ಮೇಲೆ ಕ್ರಶ್ ಆಗಲೇ ಇಲ್ಲ! ಮಹಾಭಾರತದಲ್ಲಿ ದುರ್ಯೋಧನ ಹುಟ್ಟುವದಕ್ಕಿಂತ ಮುಂಚೆ ಇವನು ಕುರುವಂಶದ ನಾಶಕ್ಕೆ ಕಾರಣವಾಗುತ್ತಾನೆ ಎಂದು ವಸಿಷ್ಠರು ಹೇಳಿದ್ದರು. ಅದಕ್ಕಾಗಿ ಅವನಿಗೆ ಈಗಲೇಮುಕ್ತಿ ಕೊಟ್ಟರೆ ಒಳ್ಳೆಯದು ಎಂದು ಹೇಳಿದ್ದರು. ಇಂದ್ರಪ್ರಸ್ಥದಲ್ಲಿ ಪಾಂಡವರು ಕಟ್ಟಿದ ಮಾಯಾಲೋಕದಲ್ಲಿ ದ್ರೌಪದಿ ಮುಂದೆ ಅಪಮಾನವಾಯಿತು ಎಂದು ಕುರುವಂಶದ ತುಂಬಿದ ಸಭೆಯಲ್ಲಿ , ಯುಧಿಷ್ಠರ ಪಗಡಿ ಆಟದಲ್ಲಿ ಸೋತ ಮೇಲೆ ದ್ರೌಪದಿಯನ್ನು ಸೇವಕಿಯಾಗಿ ಮಾಡಿಕೊಂಡು ,ಸೀರೆ ಕಳೆಯುವ ವ್ಯರ್ಥ್ಯ ಪ್ರಯತ್ನಮಾಡಿದ್ದು ಇದೆ ದುರ್ಯೋಧನ! ೧೦೧ ಕೌರವರಲ್ಲಿ ದುಶ್ಶಲೆ ದುರ್ಯೋಧನ ತಂಗಿ, ಇವಳ ಪತಿನೇ ಜಯದ್ರಥ! ದ್ರೋಣಾಚಾರ್ಯ ಹೂಡಿದ ಚಕ್ರವ್ಯೂಹಕ್ಕೆ ಮುಂದಾಳತ್ವ ವಹಿಸಿದ್ದು ಇದೆ ಜಯದ್ರಥ. ಯುದ್ಧದಲ್ಲಿ ಕೌರವರ ವದೆಗೆ ಕಾರಣವಾದ ಅಭಿಮನ್ಯುವನ್ನು , ಇದೆ ಜಯದ್ರಥನ ಮುಂದಾಳತ್ವದಲ್ಲಿ ಅಭಿಮನ್ಯುನ ಮೃತ್ಯು ಆಗಿತ್ತು. ತುಂಬಿದ ಸಭೆಯಲ್ಲಿ ದುರ್ಯೋಧನ ತಮ್ಮ ವಿಕರ್ಣ ಮಾತ್ರ ದ್ರೌಪದಿ ಸೀರೆ ಕಳೆಯುದಕ್ಕೆ ಪ್ರತಿರೋಧಿಸಿದ್ದ.
ಶಿರಸಿಯ ಯಾಣ ಇನ್ನು ೨-೩ ಘಂಟೆಗಳು ಇತ್ತು, ನನ್ನ ಗೆಳೆಯ ಮಹಾಂತೇಶ್ ಕರ್ಣನ ಪಾತ್ರದಾರಿ ! ಇವನು ನನಗೆ ಒಳ್ಳೆಯ ಗೆಳಯ. ರೆಹೆರ್ಶಲ್ದಲ್ಲಿ ಕರ್ಣನ ಶೌರ್ಯದ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಸೂತ ಪುತ್ರ ಎಂದು ಇಡೀ ಜಗತ್ತು ಹೇಳುವಾಗ ಕರ್ಣನ ಕೋಪ ತಡಿಯಲಾಗದಷ್ಟು! ದ್ರೋಣಾಚಾರ್ಯರ ಬಳಿಹೋಗಿ ನನಗೆ ಶಿಕ್ಷಣ ಕೊಡಿ ಎಂದು ಬೇಡಿಕೊಂಡರೂ ತಿರಸ್ಕರಿಸಿದ್ದರು. ಅವರಿಗೆ ಸವಾಲ್ ಎಸೆದು ಗುರು ಪರುಷರಾಮರ ಬಳಿ ಬ್ರಾಹ್ಮಣ ಎಂದು ಸುಳ್ಳು ಹೇಳಿ ಶಿಕ್ಷಣ ಪಡೆದದ್ದು, ಅವರಿಂದ ಶಾಪ ಹಾಕಿಕೊಂಡಿದ್ದು, ಜೀವನ ಪೂರ್ತಿ ಅರ್ಜುನನಿಗಿಂತ ಶ್ರೇಷ್ಠ ಎನಿಸಿಕೊಳ್ಳುವ ಹಠಕ್ಕೆ ಬಿದ್ದಿದ್ದು ಕರ್ಣನ ವ್ಯಕ್ತಿತ್ವ ಹೇಳುತ್ತದೆ ಅವನೊಬ್ಬ ಅರ್ಜುನನಷ್ಟೇ ಶೂರ! ಮಹಾಂತೇಶ್ ಡಾಕ್ಟರ್ ರಾಜಕುಮಾರ ಅವರ ಹಾಡು “ಮೆಲ್ಲುಸಿರೇ ಸವಿಗಾನ” ಎಂದು ಹಾಡುವಾಗ ಎಲ್ಲರೂ ಅವನ ಅಭಿಮಾನಿಗಳಾಗಿದ್ದರು. ಟ್ರಿಪ್ನಲ್ಲಿ ನಾನು ಮತ್ತು ಶಿವಾ ಒಟ್ಟಿಗೆ ಇರುತ್ತಿದ್ದೆವು, ಮೆಲ್ಲುಸಿರೇ ಸವಿಗಾನ ತರಹ ಶಿವನನ್ನು ತುಂಬಾ ಹಚ್ಚಿಕೊಂಡಿದ್ದೆ ,ಟ್ರಿಪ್ನಲ್ಲಿ ಅವನ ಜೊತೆ ಕೈ ಹಿಡಿದು, ಕುಣಿದು ಕುಪ್ಪಳಿಸಿದ್ದು ಅರ್ಜನ ಮತ್ತು ನಾನಾಗಿ! ನಮ್ಮ ರೂಮಿನ ಹತ್ತಿರ ಶಿವಾ ಇರಲಿ ಎಂದುಕೊಂಡರೇ ದುರ್ಯೋಧನ ಪಾತ್ರದಾರಿ ಗುರುರಾಜ್ ಬಂದಿದ್ದು, ನಮಗೆ ಇನ್ನಷ್ಟು ಸಮಯ ಕಳೆಯುವ ಅವಕಾಶ ತಪ್ಪ್ಪಿಹೋಗಿತ್ತು.
ಚಿಕ್ಕಮಗಳೂರಿನ ಕತ್ತಲೆ ರಾತ್ರಿಯಲ್ಲಿ ಅವರೆಲ್ಲ ಕೇಳಿದ್ದು, ಮುಂದೇನಾಯಿತು! ನನಗೆ ಶಾಲೆಯಲ್ಲಿ ಕರ್ಣನ ಬಗ್ಗೆ ಒಲವು ಇತ್ತು, ಆದರೆ ಅರ್ಜುನನ ಪರಾಕ್ರಮಕ್ಕೆ ಸೋತಿದ್ದೆ. ದುರ್ಯೋಧನನ ಕಣ್ಣು ನನ್ನ ಮೇಲಿತ್ತು . ಆದರೆ ತುಂಬಿದ ಸಭೆಯಲ್ಲಿ ಕರ್ಣನು ದ್ರೌಪದಯನ್ನು ವೈಶ್ಯೆ ಎಂದು ಕರೆದದ್ದು ನನಗೆ ಇಷ್ಟವಿರಲಿಲ್ಲ. ಆದರೆ ಕರ್ಣ ದಾನಸೂರ ಎಂಬುದರ ಬಗ್ಗೆ ನನಗೆ ಹೆಮ್ಮೆ ಇತ್ತು! ಅವರೆಲ್ಲ ಒಹೋ ಶಿವಾ ನ ಪ್ರೇಯಸಿ ಎಂದು ಜೋರಾಗಿ ಕೋಗಿದಾಗ, ಏನೋ ಒಂದತರಹ ಅನುಭವ!
ಕುಶಾಲನಗರದ ಮುಂಗಾರಿನ ರೋಣಿ ಮಳೆಯಲ್ಲಿ ಬಾಲ್ಕನಿಯಲ್ಲಿ ಕುಳಿತಿದ್ದ ನನಗೆ ಅಲ್ಲಿನ ಪ್ರಕೃತಿ ನನ್ನ ಮನಸ್ಸಿಗೆ ಮುದ ಕೊಡುತ್ತಿತ್ತು. ಅಲ್ಲಿ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟು ಪ್ರವಾಸವನ್ನು ಚೆನ್ನಾಗಿ ಅನುಭವಿಸುತ್ತಿದ್ದೆವು. ಶಾಲೆಯಲ್ಲಿ ಟ್ರಿಪ್ ಆದ ಮೇಲೆ ನಮ್ಮ ಪ್ರಭಂದ ಸ್ಪರ್ಧೆ ಕೊನೆಯ ಹಂತದದಲ್ಲಿ ನಮ್ಮ ನಮ್ಮ ಪ್ರದರ್ಶನ ಚೆನ್ನಾಗಿ ಮಾಡಿದ್ದೆವು. ಯಾರು ಪ್ರಶಸ್ತಿಗೆ ಅರ್ಹರು ಎಂದು ನೋಟೀಸ್ ಬಂದಿತ್ತು. ಒಟ್ಟು ಮೂರೂ ಪಾತ್ರಗಳು ಆಯ್ಕೆಯಾಗಿದ್ದವು. ಮೊದಲೆನೆಯದಾಗಿ ನಾನು ಮಂಡಿಸಿದ ಅರ್ಜುನನ ಪಾತ್ರ, ಎರಡನೆಯದಾಗಿ ಬಂದಿದ್ದು ಕರ್ಣನ ಪಾತ್ರ ಮತ್ತು ಮೂರನೆಯದಾಗಿ ಬಂದಿದ್ದು ದುರ್ಯೋಧನನ ಪಾತ್ರ! ಶಿವಾಗೆ ಎಷ್ಟು ನಿರಾಸೆಯಾಗಿತ್ತು ಅದಕ್ಕಿಂತ ಹೆಚ್ಚು ನನಗೆ ನೋವಾಗಿತ್ತು. ಜಿಟಿ ಜಿಟಿ ಮಳೆಗೆ ಅಲ್ಲಿನ ವಾತಾವರಣ ತಂಪಾಗಿತ್ತು, ಘಂಟೆ ರಾತ್ರಿ ೧೧, ಯಜಮಾನರು ಲ್ಯಾಪ್ಟಾಪ್ ಮುಚ್ಚಿ ಹಾಸಿಗೆಗೆ ಬಂದು “ಹೇಮಾ ಬಾ ಎಂದು ಕರೆದಾಗ” Give me sometime Tam, will come!
ಯಾರು ಈ ಟ್ಯಾಮ್? ಶಿವಾ ಮತ್ತು ಹೇಮಾ ಯಾವ ಕಾಲೇಜ್ನಲ್ಲಿ ತಮ್ಮ ಶಿಕ್ಷಣ ಮುಗಿಸಿದರು? ಹೇಮಾ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾಳಾ? ಶಿವಾ ಅವಳನ್ನು ಪ್ರೀತಿ ಮಾಡಿದ್ದನಾ ?ಶಿವ ಮತ್ತು ಹೇಮಾ ಮದುವೆಯಾಯಿತಾ? ಟ್ಯಾಮ್ ಮತ್ತು ಶಿವ ಒಂದೇ ನಾ?
ಮತ್ತೆ ಬರುತ್ತೇನೆ..
Categories: Stories/ಕಥೆಗಳು
good write up
LikeLike