By Bhimashankar Teli
ಸ್ನೇಹಮಹಿ ರಾಜ್ಯದ ರಾಜಕೀಯ:-
ಚಾಣಕ್ಯನ ಪ್ರಕಾರ ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆ, ಸಮಗ್ರ ಅಭಿವೃದ್ಧಿ, ರಾಜಕೀಯ ಸ್ಥಿರತೆ, ನ್ಯಾಯಯುತ ಆಡಳಿತ, ಮತಭೇದಗಳ ನಿವಾರಣೆ ಮತ್ತು ಸಾಮರಸ್ಯಕ್ಕಾಗಿ ವಿರೋಧಿಗಳ ಜೊತೆ ಅನಿವಾರ್ಯವಾಗಿ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ವ್ಯಯಕ್ತಿಕ ಲಾಭಕ್ಕಾಗಿ ಹೊಂದಾಣಿಕೆ ನಿಷಿದ್ಧ!
ರಾಜ್ಯದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ರಾಮಕೃಷ್ಣ ಹೆಗ್ಡೆ ಮೇಲೆದೇವೇಗೌಡರ ಬೆಂಬಲಿಗರು ಚಪ್ಪಲಿ ಎಸೆದಿದ್ದರು ಮತ್ತು ಹೊಡೆದಿದ್ದರು. ದೇವೇಗೌಡರ ಮೇಲೆ ಜಯರಾಜ ದಾಳಿ ಮಾಡಿದ್ದ ಎಂದು ವಿಧಾನಸಭೆಯಲ್ಲಿ ಹೇಳಿದ್ದರು. ಯಡಿಯೂರಪ್ಪನವರ ರಾಜಕೀಯ ಜೀವನದ ಪ್ರಾರಂಬದಲ್ಲಿ ಅವರ ಮಾರಣಾಂತಿಕ ಹಲ್ಲೆಯಾಗಿದ್ದು ಗೊತ್ತಿರುವ ಸಂಗತಿ. ಹೀಗೆ ಅನೇಕ ಹತ್ತಾರು ನಿದರ್ಶನಗಳು ಸಿಗುತ್ತವೆ. ಆದರೆ ಒಂದು ಮಾತು ನಮ್ಮ ರಾಜ್ಯದ ರಾಜಕಾರಣ ಅತ್ಯಂತ ಗಂಭೀರದಿಂದ ಮತ್ತು ದ್ವೇಷರಹಿತವಾದ ಎನ್ನುವ ಹೆಮ್ಮೆ ನಮಗಿದೆ.
ಹಿಂದೆ (೨೦೦೮ರಲ್ಲಿಮತ್ತು ಅದಕ್ಕಿಂತ ಹಿಂದೆ )ರಾಜ್ಯದಲ್ಲಿ ಒಂದು ಮಾತು ಇತ್ತು, ಬಿಜೆಪಿ ಪಕ್ಷ ೧೧೨ ಶಾಸಕರು ಆಯ್ಕೆಯಾದರೂ , ಸರ್ಕಾರ ರಚಿಸುವ ಕಾರ್ಯ ಮಾತ್ರ ಕನಸಿನ ಮಾತು. ಇದಕ್ಕೆ ಕಾರಣ , ಸರ್ಕಾರ ರಚನೆ ಮಾಡುವದಕ್ಕೆ ಅನೇಕರ ಬೆಂಬಲ ಅತ್ಯಗತ್ಯ, ಕಾರಣ ಒಂದು ಶಾಸಕ ಬಿಜೆಪಿ ಪಕ್ಷಕ್ಕೆ ಬಂದು ಬೆಂಬಲ ಕೊಡಬೇಕಾದರೆ, ಅವನಿಗೊಂದು ವಿಶ್ವಾಸಬೇಕಿತ್ತು , ಅದನ್ನು ಯಡಿಯೂರಪ್ಪ ೨೦೦೮ರ ನಂತರ , ಅನೇಕ ಬಿಜೆಪಿ ಮುಖಂಡರ ಸಹಾಯದಿಂದ ಮಾಡಿತೋರಿಸಿ , ದಕ್ಷಿಣದಲ್ಲಿ ಬಿಜೆಪಿ ಪಕ್ಷದ ಬಾಗಿಲನ್ನು ತೆರೆದರು. ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯ ಹಿಂದಿನ ಬಾಗಲಿನಿಂದ ಕಡತಗಳನ್ನು ತಗೆದುಕೊಂಡು ಯಡಿಯೂರಪ್ಪನವರ ಮನೆಗೆ ಹೋಗಿ ಕೆಲಸವನ್ನು ಮಾಡಿಕೊಳ್ಳುತ್ತಾರೆ ಎಂದು , ಅಂದು ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಕಠೋರ ಎದುರಾಳಿ ಕುಮಾರಸ್ವಾಮಿಯವರು ಮಾಡುತ್ತಿದ್ದ ಆರೋಪ!
ಬಿಜೆಪಿಯ ಆಂತರಿಕ ಜಗಳದಿಂದ ೨೦೧೩ರಲ್ಲಿ ಅಧಿಕಾರಕ್ಕೆ ಏರಿದ ಸಿದ್ದರಾಮಯ್ಯವರ ಕಾಲದಲ್ಲಿ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಹೊಂದಾಣಿಕೆ ಚನ್ನಾಗಿಯೇ ಇದೆ ಎಂದು ಎದುರಾಳಿಗಳ ಆರೋಪ! ಇಬ್ಬರು ಹಿರಿಯ ರಾಜಕಾರಣಿಗಳು, ಅನೇಕ ಬಾರಿ ಜನರ ಎದುರಿಗೆ ಅತ್ಯಂತ ಸರಳವಾಗಿ ಹೇಳಿದ್ದಾರೆ, ನಮ್ಮದು ಸಿದ್ದಾಂತದ ಹಗೆತನ, ಮನುಷ್ಯತ್ವದಲ್ಲ! ಅನೇಕ ಬಾರಿ , ಅವರ ಜಗಳಗಳನ್ನು ನೋಡಿದರೇ , ನಮಗೆ ಅರಿವಾಗಬೇಕಿತ್ತು, ಇಬ್ಬರೂ ಹೋರಾಡುತ್ತಿರುವುದು, ಅವರವರು ನಂಬಿದ ಸಿದ್ದಾಂತಗಳಿಗೆ! ಇದೆ ಸಿದ್ದರಾಮಯ್ಯ ಸೋತು ಮುಖ್ಯಮಂತ್ರಿ ಪದವಿ ಕಳೆದುಕೊಂಡಾಗ, ಯಡಿಯೂರಪ್ಪನವರ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ, ಸಿದ್ದರಾಮಯ್ಯನವರ ಜನಪ್ರಿಯತೆ ಬಗ್ಗೆ ಹೊಗಳಿದ್ದರು. ಇದರ ಅರ್ಥ ಸಿದ್ದಾಂತದ ಹಗೆತನ ಹೊರೆತು ವ್ಯಯಕ್ತಿಕವಲ್ಲ.
ಯಾವದು ಹೊಂದಾಣಿಕೆ? ರಾಜಕೀಯ ತಂತ್ರ:-
೨೦೧೮ರ ಚುನಾವಣೆಯಲ್ಲಿ ವಿಜಯೇಂದ್ರರ ಅವರಿಗೆ ವರುಣ ಮತಕ್ಷೇತ್ರದ ಜನರು , ನಮ್ಮಲ್ಲಿ ಇಲ್ಲಿಯವರೆಗೆ ಬಿಜೆಪಿ ಗೆದ್ದಿಲ್ಲ, ನಮ್ಮ ಕ್ಷೇತ್ರಕ್ಕೆ ಬನ್ನಿ, ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಕರೆದಾಗ, ಅಂದಿನ ಹೈಕಮಾಂಡ್ ಹಸಿರು ನಿಶಾನೆ ತೋರಿಸಿತ್ತು. ಎಂದೂ ಬಿಜೆಪಿ ಗೆಲ್ಲದ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿ ಗೆಲ್ಲಿಸುವ ಮನಸ್ಸು ಮಾಡಿದ್ದ ವಿಜಯೇಂದ್ರರವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿತ್ತು! ಹೊಂದಾಣಿಕೆ ಇದ್ದರೇ , ವಿಜಯೇಂದ್ರ ವರುಣ ಕ್ಷೇತ್ರಕ್ಕೆ ಹೋಗುವ ಮನಸ್ಸು ಮಾಡುವ ಪ್ರಮೆಯೇ ಬರುತ್ತಿರಲಿಲ್ಲ. ಟಿಕೆಟ್ ತಪ್ಪಿಸುವ ಹುನ್ನಾರದ ಹಿಂದೆ ಯಾರು ಇದ್ದರು ಮತ್ತು ಇಲ್ಲಿ ಯಾವ ರೀತಿ ಹೊಂದಾಣಿಕೆ ಯಾಗಿತ್ತು?ಅಂದು ಎಷ್ಟು ಬಿಜೆಪಿ ನಾಯಕರಿಗೆ ಖುಷಿಯಾಗಿತ್ತು?
೨೦೨೩ರ ಚುನಾವಣೆಯಲ್ಲಿ, ಯಡಿಯೂರಪ್ಪನವರು ವಯಸ್ಸಿನ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧೆಮಾಡಲ್ಲ ಎಂದಾದ ಮೇಲೇನೆ ಶಿಕಾರಿಪುರದಲ್ಲಿ, ವಿಜಯೇಂದ್ರರ ಪ್ರವೇಶ ಪಕ್ಕಾ ಆಗಿದ್ದು. ಒಂದು ಕಡೆ ಕಡೆಯ ಗಳಿಗೆಯಲ್ಲಿ ೨೦೧೮ರಲ್ಲಿ ವರುಣ ಕ್ಷೇತ್ರದ ಟಿಕೆಟ್ ನಿರಾಕರಣೆ, ಇಂದು ಸ್ವಂತ ಕ್ಷೇತ್ರವಾದ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಾಲೇಬೇಕು ಎಂಬ ಸಂದರ್ಭದಲ್ಲಿ, ವಿಜಯೇಂದ್ರ ವರುಣ ಕ್ಷೇತ್ರಕ್ಕೆ ನಿಲ್ಲಬೇಕು ಎಂದು ಒಂದು ಬಿಜೆಪಿ ತಂಡ ರಣತಂತ್ರ ಹಣೆಯುತ್ತಿತ್ತು. ಬಿಜೆಪಿ ಗೆಲ್ಲಿಸುವದಕ್ಕೆ ಅಲ್ಲ, ವಿಜಯೇಂದ್ರರನ್ನು ವರುಣಾಗೆ ಕಳುಹಿಸಿ, ಸೋಲಿಸುವ ಹುನ್ನಾರ! ಮತ್ತೊಂದು ಕಡೆ ಸರ್ಕಾರ ಇರುವಷ್ಟು ದಿನ ವಿಜಯೇಂದ್ರರನ್ನು ಯಾವದೇ ಹುದ್ದೆ ಕೊಡದೆ , ವರುಣಾ ಕ್ಷೇತ್ರಕ್ಕೆ ಹೋಗಿ ನಿಲ್ಲಿ ಎಂದು ಕೇಳುವುದು ಎಷ್ಟು ಸೂಕ್ತ? ಸೊಮ್ಮಣ್ಣನವರು ಚಾಮರಾಜನಗರಕ್ಕೆ ಉಸ್ತುವಾರಿ ಸಚಿವರು, ಗೋವಿಂದರಾಜ ನಗರ ಮತ್ತು ವಿಜಯನಗರ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆ ಇರುವ ಕಾರಣ , ಅವರು ಚಾಮರಾಜನಗರದಲ್ಲಿ ಅಲ್ಲಿ ಚೆನ್ನಾಗಿ ತಯಾರಿ ಮಾಡಿಕೊಂಡಿದ್ದರು. ಇಲ್ಲೂ ಸಹಿತ ವಿಜಯೇಂದ್ರ ನಿಲ್ಲಬೇಕು ಎಂದು ಪ್ರೀತಿ ತೋರಿಸಿದವರು, ೨೦೧೮ರಲ್ಲಿ ಟಿಕೆಟ್ ಕೊಡದೆ ಇದ್ದಾಗ ಖುಷಿಪಟ್ಟಿದ್ದುಂಟು!
ಈಶ್ವರಪ್ಪ ಅವರು ಬೇರೆಯವರ ಮಾತು ಕೇಳಿ ತಮ್ಮ ಕಾಲು ಮೇಲೆ ತಾವೇ ಕಾಲು ಹಾಕಿಕೊಂಡರು. ಬೊಮ್ಮಾಯಿಯವರೇ ೪೦ ಸಾವಿರ ಅಂತರದಿಂದ ಗೆದ್ದರು. ಒಂದು ವೇಳೆ ಕಾಂತೇಶ್ಗೆ ಟಿಕೆಟ್ ಕೊಟ್ಟಿದ್ದರೇ ಗೆಲುವು ಅಸಾದ್ಯವಿತ್ತು ಎಂದು ಮನಗಂಡೇ ಹೈಕಮಾಂಡ್ ಅವರಿಗೆ ಟಿಕೆಟ್ ಕೊಡಲಿಲ್ಲ. ಆದರೆ ಈಶ್ವರೇಪ್ಪನವರು ಯಡಿಯೂರಪ್ಪನವರ ಮೇಲೆ ಗೂಬೆ ಕೂರಿಸಿದರು. ಅಮಿತ್ ಷಾ ಅವರಿಗೆ ಸ್ಪಂದಿಸಿ ಬನ್ನಿ ಮಾತಾಡೋಣ ಎಂದರೂ ತಮ್ಮ ವಾದವನ್ನು ಮುಂದುವರೆಸಿದರು. ಗೆಲ್ಲುವ ಸಾಮರ್ಥ್ಯವಿದ್ದರೆ ಹಾವೇರಿಯಲ್ಲಿ ಪಕ್ಷೇತರ ನಿಲ್ಲಬೇಕಿತ್ತು ಆದರೆ ಸ್ಪರ್ಧೆಮಾಡಿದ್ದು ಶಿವಮೊಗ್ಗದಲ್ಲಿ. ಇದರ ಅರ್ಥ ಇಷ್ಟೇ ಯಡಿಯೂರಪ್ಪನವರಿಗೆ ತೊಂದರೆ ಕೊಡುವ ಉದ್ದೇಶ ಸ್ಪಷ್ಟ!
ಪಕ್ಷಕ್ಕೆ ಯಾರು ಡ್ಯಾಮೇಜ್ ಮಾಡಿದ್ದಾರೆ? :-
ರಾಜ್ಯ ಬಿಜೆಪಿ ಸ್ವಯಂ ಘೋಷಿತ ನಾಯಕರು ಪಕ್ಷದ ನಾಯಕರನ್ನು ನಿಂದಿಸುವುದು , ಗಾಳಿಯಲ್ಲಿ ಗುಂಡು ಹೊಡೆಯುವುದು , ಹೊಂದಾಣಿಕೆ ರಾಜಕಾರಣ ಇದೆ ಎಂದು ಬೊಗಳೆ ಬಿಡುವುದು ಸಾಮಾನ್ಯವಾಗಿದೆ. ಮುಖ್ಯಮಂತ್ರಿ ಖುರ್ಚಿ ೨೫೦೦ ಕೋಟಿಗೆ ಇದೆ, ೪೦% ಭ್ರಷ್ಟಾಚಾರ ಇದೆ ಎಂದು ಹೇಳಿದ್ದು ಬಿಜೆಪಿ ಪಕ್ಷದ ನಾಯಕರೇ ಎನ್ನವುದು ಸೋಜಿಗದ ಸಂಗತಿ! ಇಂಥಹ ನಾಯಕರಿಂದ ಪಕ್ಷಕ್ಕೆ ಹಾನಿಯೇ ಹೊರೆತು ಲಾಭವಿಲ್ಲ ಎನ್ನವುದು ಕಾರ್ಯಕರ್ತರಿಗೆ ಅರಿವಾಗುತ್ತಿದೆ. ಅದನ್ನೇ ಮೊನ್ನೆ ವಿಧಾಸಭೆಯಲ್ಲಿ ಶರಣು ಸಲಗಾರ ಮಾಡಿದ್ದು. ಮುಂದೆ ನಾಯಕರ ಮೊಂಡುವಾದ ಮುಂದುವರೆದರೆ ಇನ್ನು ಅನೇಕ ಶಾಸಕರು ದಂಗೆ ಏಳುವ ಕಾಲಬರುತ್ತದೆ. ಅದನ್ನೇ ವಿಜಯೇಂದ್ರ ಕಾಲವೇ ಅದಕ್ಕೆ ಉತ್ತರ ಕೊಡುತ್ತದೆ ಎಂದು ಹೇಳಿದ್ದಾರೆ! ತಮ್ಮ ಶಕ್ತಿಯಿಂದ ತಮ್ಮ ಜಿಲ್ಲೆಯಲ್ಲೇ ಒಬ್ಬ ಶಾಸಕನನ್ನು ಆಯ್ಕೆಮಾಡಿಸುವ ತಾಕತ್ತು ಇಲ್ಲ ಆದರೂ ನಾನೇ ನಾಯಕ , ಪಕ್ಷವನ್ನು ಶುದ್ದೀಕರಣ ಮಾಡುತ್ತೇನೆ ಎಂದು ಕನಸು ಕಾಣುತ್ತ ರಾಜ್ಯದ ಜನರಿಗೆ ಮನರಂಜನೆ ಒದಗಿಸುತ್ತಿದ್ದಾರೆ.
ಮಹಾಭಾರತದಲ್ಲಿ, ಕೌರವರು ಅಭಿಮನ್ಯುವನ ಮೇಲೆ ಸೇಡು ತೀರಿಸಿಕೊಳ್ಳಲು ಎಷ್ಟು ಶಿಸ್ತುಬದ್ಧ ಯೋಜನೆ ಮಾಡಿದ್ದರು ಎಂದರೆ ಅಂದಿನ ದಿವಸ ಪಾಂಡವರು ತಮ್ಮ ಕಣ್ಣ ಮುಂದೆಯೇ ಮಗನ ಜೀವ ಹೋಗುತ್ತಿದ್ದರೂ ತಡೆಯಲು ಆಗಲಿಲ್ಲ. ಅಭಿಮನ್ಯುವಿನ ಮೃತ್ಯು ಆದ ನಂತರ , ಅರ್ಜುನನ ಕ್ರೋಧಕ್ಕೆ ಯಾರಿಗೂ ತಡೆಯಲು ಸಾದ್ಯವಿರಲಿಲ್ಲ! ರಾತ್ರಿಯೇ ಕೌರವರ ಬಿಡಾರಕ್ಕೆ ನುಗ್ಗಿ, ಜಯದ್ರಥನ ವದೆಗೆ ವರ್ಥ್ಯ ಪ್ರಯತ್ನಮಾಡಿದ್ದ. ಕೃಷ್ಣನ ಶಿಸ್ತುಬದ್ಧ ಯೋಜನೆ ಜಯದ್ರಥನ ವದೆಗೆ ಕಾರಣವಾಗಿತ್ತು ಹೊರೆತೆ ಲೂಸ್ ನಾಲಿಗೆಯಿಂದ ಅಥವಾ ಒಣ ಕೋಪದಿಂದಲ್ಲ! ಹಾಗೆಯೇ ಸರ್ಕಾರದ ಮೇಲೆ ಆರೋಪಹೊರಿಸಿ ಅದರ ವಿರುದ್ಧ ಹೋರಾಡಲು ಸಾಮೂಹಿಕ ನಾಯಕತ್ವ, ಫಲಪ್ರದ ಯೋಜನೆಗಳು, ತಾಳ್ಮೆ, ಸಂಯಮ ಗೆಲುವು ಕೊಡಬಲ್ಲದೇ ವಿನಃ ಬಾಯಿಗೆ ಬಂದಂತೆ ಹೇಳುವುದು ಅಲ್ಲ. ನಿಮ್ಮ ನಾಯಕತ್ವ ಪಕ್ಷಕ್ಕೆ ಅನುಕೂಲವಾಗಬೇಕೇ ವಿನಃ ಹಾನಿಮಾಡಬಾರದು.
ಪಕ್ಷಕ್ಕೆ ನಿಷ್ಠೆಯ ಕಾರ್ಯಕರ್ತರನೇ ಸುಪ್ರೀಂ:-
ಬಿಜೆಪಿ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುವ ದೇವ ದುರ್ಲಭ ಕಾರ್ಯಕರ್ತರು. ಬಿಜೆಪಿ ಪಕ್ಷ ರಾಜ್ಯದಲ್ಲಿ ಇನ್ನೂ ಇದೆ ಎನ್ನುವದಕ್ಕೆ ಕಾರಣ ಗಟ್ಟಿತನದಿಂದ ಪಕ್ಷಕ್ಕೆ ನಿಶ್ವಾರ್ಥ ಸೇವೆಮಾಡುವ ಕಾರ್ಯಕರ್ತರ ಪಡೆಯಿಂದ. ೨೦೨೩ರಲ್ಲಿ ಪಕ್ಷ ಸೋತಾಗ ಅತ್ಯಂತ ನೋವಾಗಿದ್ದು, ಬಿಜೆಪಿ ಕಾರ್ಯಕರ್ತರಿಗೆ! ನಳಿನ್ ಕುಮಾರ್ ಕಟೀಲ್ ಅವರಿಂದ ತೆರವಾದ ಸ್ಥಾನಕ್ಕೆ, ಮತ್ತೊಬ್ಬ ನಿಷ್ಠನನ್ನು ಹುಡುಕುವದಕ್ಕಾಗಿ ತಗೆದುಕೊಂಡು ಸಮಯ ಬರೋಬ್ಬರಿ ೬ ತಿಂಗಳು!
ಬಿಜೆಪಿ ಹೈಕಮಾಂಡ್ ಎಲ್ಲವನ್ನು ತುಲನೆ ಮಾಡಿ ವಿಜಯೇಂದ್ರರನ್ನು ಅಧ್ಯಕ್ಷ ಮಾಡಿ ಕಾರ್ಯಕರ್ತರಿಗೆ ಸಂತೋಷದ ಸುದ್ದಿ ಕೊಟ್ಟಿತ್ತು. ರಾಜ್ಯದಲ್ಲಿ ಬೇರೆ ನಾಯಕರೇ ಇರಲಿಲ್ಲವೇ? ಖಂಡಿತ ಇದ್ದರೂ , ಆದರೆ ಅರ್ಹ ನಾಯಕರಲ್ಲಿ, ಹುದ್ದೆ ಒಲಿಯುವುದು ಒಬ್ಬರಿಗೆ ಮಾತ್ರ. ಹಿಂದೆ ಸಿಟಿ ರವಿಯವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ, ಬೇರೆ ಯಾರು ಅರ್ಹರಿಲ್ಲವೇ? ಯತ್ನಾಳರು ಚಿಕ್ಕ ವಯಸ್ಸಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಮಂತ್ರಿಮಂಡಲದಲ್ಲಿ ಸ್ಥಾನ ಪಡೆದಾಗ , ರಾಜ್ಯದಲ್ಲಿ ಅರ್ಹ ಯಾವದೇ ನಾಯಕವಿರಲಿಲ್ಲವಾ? ರಾಷ್ಟ್ರದಲ್ಲಿ ಅನಂತಕುಮಾರ್, ಜೋಶಿ ಇವೆರಲ್ಲರು ಒಳ್ಳೆಯ ಹುದ್ದೆಗಳನ್ನು ಪಡೆದಾಗ ಯಡಿಯೂರಪ್ಪ ಯಾವತ್ತೂ ಅವರನ್ನು ನಿಂದಿಸಿದ ಉಧಾಹರಣೆ ಇಲ್ಲ. ಇಂದು ವಿಜಯಶಂಕರ ಅವರಿಗೆ ಮೇಘಾಲಯ ರಾಜ್ಯಪಾಲ ಮಾಡಿದ್ದು ಒಬ್ಬ ನಿಷ್ಠಾವಂತ ಕಾರ್ಯಕರ್ತವೆಂದು! ಪಕ್ಷ ಸುಮ್ಮನೆ ಯಾವದೇ ನಿರ್ಧಾರ ತಗೆದುಕೊಳ್ಳುವದಿಲ್ಲ. ಕಾರ್ಯಕರ್ತನ ಕ್ಷಮತೆ, ನಿಷ್ಠೆ, ಶಿಸ್ತು ಪ್ರಮಖವಾಗುತ್ತದೆ.
ಹೀಗೆ ಅನೇಕ ಹತ್ತಾರು ಪ್ರಮುಖ ಹುದ್ದೆಗಳನ್ನು ಕೊಡುವಾಗ ಖಂಡಿತವಾಗಲೂ ಎಲ್ಲರನ್ನು ಗಣನೆಗೆ ತಗೆದುಕೊಂಡು ಆಯ್ಕೆಮಾಡಿರುತ್ತಾರೆ ವಿನಃ ಯಾವದೇ ಒಂದು ಕಾರಣಕ್ಕೆ ಅಲ್ಲ ಎನ್ನವುದು ಸತ್ಯ! ಕೇವಲ ನನಗಿಂತ ಚಿಕ್ಕವ ಎಂಬ ಕಾರಣದಿಂದ ಮಾತು ಮಾತಿಗೆ ಅಪ್ಪ ಮಕ್ಕಳ ಬಗ್ಗೆ ಬೆಂಕಿ ಕಾರುವುದು ಸಬ್ಯಸ್ಥರ ಲಕ್ಷಣವಲ್ಲ. ಕೆ ರ್ ಪೇಟೆಗೆ ವಿಜಯೇಂದ್ರ ಚುನಾವಣೆಗೆ ಉಸ್ತುವಾರಿ ತಗೆದುಕೊಂಡಾಗ , ಎದೆತಟ್ಟಿ ಹೇಳಿ ಬಿಜೆಪಿ ಗೆಲ್ಲುತ್ತೆ ಎಂದು ಯಾರು ಊಹೆ ಮಾಡಿದ್ದೀರಿ? ದೇವೇಗೌಡರೇ ಸಹಿತ ಊಹಿಸಿರಲಿಲ್ಲ! ಶಿರಾದಲ್ಲಿ? ಅಲ್ಲಿಯೂ ಸಹಿತ ಅದೇ ಪರಸ್ಥಿತಿ! ಕೊಟ್ಟ ಕೆಲಸವನ್ನು ನಿಯತ್ತಾಗಿ , ತಮಗೆ ಅನುಭವವಿದ್ದಷ್ಟು ಪಕ್ಷಕ್ಕೆ ಅನಕೂಲ ಮಾಡಿದ್ದಾರೆ. ಅದರ ಜೊತೆ ಟಿಕೆಟ್ ತಪ್ಪಿದಾಗ, ಅವರ ತಂದೆಯವರನ್ನು ಮುಖ್ಯಮಂತ್ರಿ ಪದವಿಯಿಂದ ತಗೆದಾಗ, ಖಾಸಗಿ ಕೇಸಲ್ಲಿ ಯಡಿಯೂರಪ್ಪನವರು ಜೈಲ್ಗೆ ಹೋದಾಗ, ಎಂದೂ ಪಕ್ಷದ ಬಗ್ಗೆ ವಿಜಯೇಂದ್ರ ಹಗುರವಾಗಿ ಮಾತನಾಡಿದ ಉಧಾಹರಣೆ ಇಲ್ಲ. ಇದು ಬಿಜೆಪಿ ಕಾರ್ಯಕರ್ತನಿಗೆ ಇರಬೇಕಾದ ಶಿಸ್ತು.
ಕಾರ್ಯಕರ್ತರ ಅಭಿಪ್ರಾಯ:-
ಸದ್ಯ ವಿಜಯೇಂದ್ರ ಯಡಿಯೂರಪ್ಪನವರು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಬಂದು ಕೇವಲ ೧೮ ತಿಂಗಳು ಕಳೆದಿವೆ, ವಾಲ್ಮೀಕಿ, ಮುಡಾ ಹಗರಣ ಅದರ ಜೊತೆ ಸರ್ಕಾರದ ವರ್ಗಾವಣೆ ದಂದೆ ಬಗ್ಗೆ ವಿರೋಧ ಪಕ್ಷವಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ೪೦% ಕಮಿಷನ್ ಸರ್ಕಾರವೆಂದು ಜರಿದಿದ್ದ ಕಾಂಗ್ರೇಸ್ ಅಧ್ಯಕ್ಶ ಅದೊಂದು ನಮ್ಮ ಚುನಾವಣೆ ಪ್ರಚಾರದ ಭಾಗವೆಂದು ಒಪ್ಪಿಕೊಂಡಿದ್ದಾರೆ. ಹಿರಿಯರನ್ನು ಜೊತೆಗೆ ತಗೆದುಕೊಂಡು ಹೋಗುತ್ತಿದ್ದಾರೆ. ಇದೆಲ್ಲವೂ ಬಿಜೆಪಿ ಅಧ್ಯಕ್ಷರಿಗೆ ಸಲ್ಲಬೇಕು ತಾನೇ? ಒಂದು ವಿರೋಧಿ ಪಕ್ಷವಾಗಿ, ಪಾದಯಾತ್ರೆ, ಅಹೋರಾತ್ರಿ ಧರಣಿ, ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೇಳುವುದು, ಇವೆಲ್ಲವೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದು ನಿರಂತರ ಹೋರಾಟ! ಸರ್ಕಾರ ಮತ್ತು ವಿರೋಧ ಪಕ್ಷಗಳು, ಅಭಿವೃದ್ಧಿಗೆ ಬಂದಾಗ ಕೂಡಿಕೊಂಡು ಕೆಲಸ ಮಾಡಬೇಕು, ತಪ್ಪು ಕಂಡಾಗ ಅದನ್ನು ಪ್ರಶ್ನೆ ಮಾಡಬೇಕು!
ಎಲ್ಲವನ್ನು ಒಟ್ಟಿಗೆ ತುಲನೆ ಮಾಡಿದಾಗ , ಹೇಗಿದೆ ವಿಜಯೇಂದ್ರರ ಪಕ್ಷ ಸಂಘಟನೆ? ಮಾಡುತ್ತಿರುವ ಕೆಲಸ ಕಾರ್ಯಕರ್ತರಿಗೆ ಖುಷಿ ತಂದಿದೆಯೇ?ಇದಕ್ಕೆ ಉತ್ತರ. ಕಾರ್ಯಕರ್ತರು ಖುಷಿಯಲ್ಲಿ ಇದ್ದಾರೆ. ಆದರೆ ಇನ್ನು ಬಿಜೆಪಿ ಪಕ್ಷ ಗಟ್ಟಿತನದಿಂದ ವಿರೋಧ ಪಕ್ಷವನ್ನು ಎದುರಿಸಬೇಕು. ಮತ್ತೆ ಕಾರ್ಯಕರ್ತರ ಜೊತೆ ಹೆಚ್ಚಿನ ಸಂಪರ್ಕ ಸಾಧಿಸುವ ಯೋಜನೆಗಳು ಬೇಕಾಗಿವೆ. ಬಿಜೆಪಿ ಪಕ್ಷದಿಂದ ಕೇಂದ್ರದಿಂದ ಬರುತ್ತಿರುವ ಯೋಜೆನೆಗಳ ಪ್ರಚಾರ, ಗ್ರಾಮೀಣ ಭಾಗದಲ್ಲಿ ಬಿಜೆಪಿ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಗ್ರಾಮೀಣ ಕ್ರೀಡೆಗಳ ಪಂದ್ಯಾಟಗಳು, ಬಿಜೆಪಿ ಕಾರ್ಯಕರ್ತರ ಜೊತೆ ಸಣ್ಣ ಸಣ್ಣ ಪಾದಯಾತ್ರೆಗಳು(ರಾಜ್ಯದ ಪ್ರಮುಖ ಬೇಡಿಕೆಗಳು, ನ್ಯೂನ್ಯತೆಗಳ ಬೆಳಕು ಚೆಲ್ಲುವುದು) ಮತ್ತು ಪ್ರಮುಖ ಹಬ್ಬಗಳನ್ನು ಅವರ ಜೊತೇನೆ ಆಚರಿಸೋದು ಇವಲ್ಲೆವೂ, ಕಾರ್ಯಕರ್ತರ ಬೇಡಿಕೆಗಳು, ಅವರ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲು ಅನಕೂಲವಾಗಬಲ್ಲದು.
ಸೋಶಿಯಲ್ ಮೀಡಿಯಾದಲ್ಲಿ ಬರುವ ಕಾರ್ಯಕರ್ತರ ಪೋಸ್ಟ್ಗಳು, ಕಾಮೆಂಟ್ಗಳ ಬಗ್ಗೆ ಗಮನಹರಿಸಿ. ಅದಕ್ಕಿಂತ ಬೇರೆ ದೊಡ್ಡ ಫೀಡ್ ಬ್ಯಾಕ್ ನಿಮಗೆ ಸಿಗುವದಿಲ್ಲ. ಯಾವದು ಪಕ್ಷಕ್ಕಾಗಿ ಇದೆಯೋ ಅಂಥಹ ಸಲಹೆಗಳು ಖಂಡಿತ ತಗೆದುಕೊಳ್ಳಬೆಕು. ನಿರಂತರ ಕಲಿಕೆ, ಕಾರ್ಯಕರ್ತರ ಜೊತೆ ಸಂಪರ್ಕ ಅನುಭವನ್ನು ಹೆಚ್ಚಿಸುತ್ತದೆ, ಕೊಟ್ಟ ಹುದ್ದೆ ಪಕ್ಷದ , ರಾಜ್ಯದ ಮತ್ತು ಕಾರ್ಯಕರ್ತರ ಹಿತ ಕಾಪುಡುವಲ್ಲಿ ವಿಜಯೇಂದ್ರ ಯಶಸ್ವಿಯಾಗುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರ ಆಶಯ!. ಇದೆನ್ನೆ ಎಲ್ಲ ಗಣ್ಯಮಾನ್ಯ ನಾಯಕರು ಮಾಡಿದ್ದಾರೆ.
Categories: Articles
