ಲಕ್ಷ್ಮಣ್ ಸವದಿಯವರ ಆಕಳು ಮತ್ತು ಕರು ಕಥೆಗೆ ಒಲಿದ ಸಿಂದಗಿ ಜನತೆ!
ಉಪಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿಗೆ ೨೦೨೩ರಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂಬ ಕನಸು ಬೀಳುತ್ತಿದೆ ಅಂತೇ! ಬೀಳುವುದು ಸಹಜ! ಯಡಿಯೂರಪ್ಪನವರ ಶಿಷ್ಯ ಮತ್ತು ಯಡಿಯೂರಪ್ಪನವರ ಅಣತಿ ಮೇರೆಗೆ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ನಂತರ ನಡೆದ ಮೊದಲ ಉಪಚುನಾವಣೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳು ಗೆಲ್ಲಲೇಬೇಕು ಎಂದು ಪಣ ತೊಟ್ಟು ಎರಡು ಕ್ಷೇತ್ರಗಳು ಗೆದ್ದು ನಾನು ನಾಯಕತ್ವವನ್ನು ಹೊರಬಲ್ಲೆ ಎಂದು ನಿರೂಪಿಸಿದ್ದಾರೆ. ಅವರಿಗೆ […]
