ರಾಜ್ಯದಲ್ಲಿ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗೆ ವೇದಿಕೆ ಸಜ್ಜಾಗಿದ್ದು. ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಮೊಟ್ಟ ಮೊದಲಿಗೆ ಜೆಡಿಎಸ್ ನಂತರ ಕಾಂಗ್ರೇಸ್ ಕೊನೆಗೆ ಭಾರತೀಯ ಜನತಾ ಪಕ್ಷ ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕಾಂಗ್ರೇಸ್ ಪಕ್ಷದಿಂದ ಮಾನೆ ಮತ್ತು ಬಿಜೆಪಿಯಿಂದ ಶಿವರಾಜ್ ಸಜ್ಜನರ್ ಅಭ್ಯರ್ಥಿಗಳಾಗಿದ್ದರೆ. ಕಾಂಗ್ರೇಸ್ ಪಕ್ಷ ಮತ್ತು ಜೆಡಿಎಸ್ ಇಂದು ತಮ್ಮ ಅಭ್ಯರ್ಥಿಗಳ ನಾಮಪತ್ರಗಳನ್ನು ಸಲ್ಲಿಕೆ ಮಾಡಿದವು. ಉಪಚುನಾವಣೆ ಗೆಲ್ಲೆಲೇಬೇಕು ಎಂದು ಸ್ವತಃ ವಿರೋಧ್ […]
ಜಗತ್ತಿನ ಮಹಾನ್ ಸಾಮ್ರಾಟ ಅಲೆಗ್ಸಾಂಡರ್ ನಿಗೆ ಭಾರತದಿಂದ ಮರಳಿ ಗ್ರೀಕ ದೇಶಕ್ಕೆ ಹೋಗುವಾಗ ತನ್ನ ಗುರು ಅರಿಸ್ಟಾಟಲ್ ಭಾರತದಿಂದ ಒಬ್ಬ ವಿವೇಕವಂತ ಸನ್ಯಾಸಿಯನ್ನು ಕರೆತರಲು ಹೇಳಿರುವ ಮಾತು ನೆನಪಾಯಿತು. ಗುರುವಿನ ಮಾತು ಅಕ್ಷರಶಃ ಪಾಲಿಸಲು ಆಗ ಅಲೆಗ್ಸಾಂಡರ್ ಮುಂದಾದನು. ಅಲೆಗ್ಸಾಂಡರ್ ನ ಗುರು ಅರಿಸ್ಟಾಟಲ್ ಹೇಳಿ ಕೇಳಿ ಒಬ್ಬ ತಾರ್ಕಿಕ ವ್ಯಕ್ತಿ ಆತನ ಚಿತ್ತ ಗಣಿತ ಮತ್ತು ವಿಜ್ಞಾನದ ಚಿತ್ತ. ವಿಜ್ಞಾನದ ಚಿತ್ತ ಸದಾ ಸಮಗ್ರತೆಯನ್ನು ತುಂಡರಿಸಿ […]
ಮಾತು ತಪ್ಪದ ನಾಯಕ:- ೨೦೧೯ರಲ್ಲಿ ರಾಜ್ಯದಲ್ಲಿ ನಡೆದ ೧೨ ಉಪಚುನಾವಣೆಯ ಸಂದರ್ಭದಲ್ಲಿ ಶಿವಯೋಗಿ ಸಾಕ್ಷಿಯಾಗಿ ಹೇಳುತ್ತೇನೆ ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಯಡಿಯೂರಪ್ಪನವರು ಭಾಗವಹಿಸಿದ ಬಹಿರಂಗ ಸಭೆಯಲ್ಲಿ ಹೇಳಿದ ಹಾಗೆ ಮಾಡಿ ತೋರಿಸಿದ್ದು ಅಥಣಿಯ ಜನರ ಸೇವಕ ಲಕ್ಷ್ಮಣ್ ಸವದಿ! ಒಂದು ಸಲ ಮಾತು ಕೊಟ್ಟರೇ ಮುಗಿತು ಪ್ರಾಣ ಒತ್ತೆ ಇಟ್ಟಾದರು ಮಾತು ಉಳಿಸಿಕೊಳ್ಳುವ ಜಾಯಮಾನ ಲಕ್ಷ್ಮಣ್ ಸವದಿಯದ್ದು ಎಂದು […]
ಬರದನಾಡೆಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಗೆ ನೀರಿದ್ದರೂ ಬರದ ಜಿಲ್ಲೆ ಎಂದು ಕೆರೆಯಿಸಿಕೊಳ್ಳುವ ಜಿಲ್ಲೆ. ಕೃಷ್ಣ ನದಿಯ ಎಂದರೆ ಆಲಮಟ್ಟಿ ಜಲಾಶಯದಿಂದ ಕೆಲವು ತಾಲೂಕುಗಳು ಬರಪೀಡಿತ ಪ್ರದೇಶದಿಂದ ಮುಕ್ತವಾಗಿವೆ. ಇನ್ನು ಕೆಲವು ಹಳ್ಳಿಗಳು ಮುಕ್ತವಾಗಬೇಕಿವೆ. ವಿಶೇಷವಾಗಿ ಇಂಡಿ , ನಾಗಠಾಣ ಮತ್ತು ಬಬಲೇಶ್ವರ ತಾಲೂಕುಗಳ ಕೆಲವೊಂದು ಹಳ್ಳಿಗಳು ಅತಿ ಎತ್ತರದಲ್ಲಿ ಇರುವುದರಿಂದ ಅಲ್ಲಿಗೆ ನೀರನ್ನು ಎತ್ತಿ ತಲುಪಿಸಬೇಕಾದ ಅನಿವಾರ್ಯತೆ. ಇದೇನು ದೊಡ್ಡ ಕೆಲಸವಲ್ಲ. ಆದರೆ ಸರ್ಕಾರಕ್ಕೆ ಮತ್ತು […]
ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಉಪಚುನಾವಣೆಯ ಹಣಾಹಣಿಯಲ್ಲಿ ಗೆಲ್ಲುವ ಕುದರೆ ಯಾವದು? ಇಲ್ಲಿ ಪಕ್ಷಗಳ ಬಲಾಬಲ ನೋಡಿದರೆ ಕಳೆದ ಬಾರಿ ಸ್ವಲ್ಪ ಮತಗಳ ಅಂತರದಿಂದ ಗೆದ್ದಿದ್ದ ಮನಗೂಳಿ ಮುತ್ಯಾ ಜೆಡಿಎಸ್ ಪಕ್ಷದವರಾಗಿದ್ದವರು. ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದ ರಮೇಶ ಭೂಸನೂರ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಚುನಾವಣೆಕ್ಕಿಂತ ಮುಂಚೆ ಗೆಲ್ಲುವ ಕುದರೆ ಎಂದೇ ಖ್ಯಾತಿ ಪಡೆದಿದ್ದ ಭೂಸನೂರ ಯಾವಾಗಲೂ ಜನರ ಮಧ್ಯೆ ಇರುವ ವ್ಯಕ್ತಿ! ಜನರ ಶಾಸಕ […]
ಬದಲಾವಣೆಯ ಪರ್ವ! ಸುಮಾರು ೯೨ ವರ್ಷಗಳ ಹಿಂದೆ ನಮ್ಮನ್ನು ಆಳಿದ ಬ್ರಿಟಿಷರು ಕಟ್ಟಿದ ಸಂಸತ್ತು. ೧೯೩೦ರಲ್ಲಿ ಬ್ರಿಟಿಷರು ಎಂದರೆ ಎಡ್ನವಿನ್ ಲುಟೆನ್ಸ್ ಮತ್ತು ಹರ್ಬರ್ಟ್ ಬೇಕರ್ ಇಬ್ಬರು ವಾಷಿಂಗ್ಟನ್ ಕ್ಯಾಪಿಟಲ್ ಕಾಂಪ್ಲೆಕ್ಸ್ ಮತ್ತು ಪ್ಯಾರಿಸ್ ಚಾಂಪ್ಸ್ ಎಲಿಸೀಸ್ ಅಂದ ಚಂದವನ್ನು ನೋಡಿ ಕಟ್ಟಿದ ಕಟ್ಟಡ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಅನೇಕ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ನಿರ್ಮಿಸಲು ಕೆಲವು ಕೊಳಕು ಮತ್ತು ಅವ್ಯವಸ್ಥೆಯ ನಿರ್ಮಾಣವನ್ನು […]
By ವಿಠಲ.ಆರ್.ಯಂಕಂಚಿ, ಬಮ್ಮನಜೋಗಿ ಭವ್ಯ ಭಾರತದ ಕನಸುಗಾರ ಆಡಳಿತದ ಚಾಣಾಕ್ಯ ˌಚಲದಂಕ ಮಲ್ಲˌ ಸವಾಲುಗಳನ್ನು ಮೇಟ್ಟಿ ನಿಲ್ಲುವ ಸರದಾರ ಮುನ್ನುಗ್ಗುವ ಎದೆಗಾರಿಕೆಯನ್ನು ಹೊಂದಿರುವ ನಾಯಕ ˌಕ್ರೀಯಾಶೀಲ ವ್ಯಕ್ತಿತ್ವ ಹೊಂದಿರುವ ರಾಜಕಾರಣಿಯಾಗಿರುವ ಶ್ರೀ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವೇ ಒಂದು ಮೈಲುಗಲ್ಲಾಗಿದೆ. ಮೊದಿಜೀಯವರ ನೇತೃತ್ವದ ಎನ್ಡಿಎ ಸರ್ಕಾರದ ಏಳು ವರ್ಷಗಳ ಅವಧಿಯಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ. ಆರೋಗ್ಯ, ರಾಷ್ಟ್ರೀಯ ಭದ್ರತೆ, ಸ್ವಚ್ಛತಾ ಅಭಿಯಾನ ˌಮನ್ ಕಿ ಬಾತ್ ಕಾರ್ಯಕ್ರಮ […]
ಜನತಾ ಪರಿವಾರದ ಮನೆ ಒಡೆದಿತ್ತು, ಕಾಂಗ್ರೇಸ್ಗೆ ಕೃಷ್ಣರ ಪಾಂಚಜನ್ಯ ಕೈಹಿಡಿದಿತ್ತು. ೧೯೯೯ರಲ್ಲಿ ಎಸ್ ಎಮ್ ಕೃಷ್ಣರವರು ರಾಜ್ಯದಲ್ಲಿಒಂದು ಯಾತ್ರೆ ಪ್ರಾರಂಭ ಮಾಡಿ ಅದಕ್ಕೆ ಪಾಂಚಜನ್ಯ ಎಂದು ಹೆಸರಿಟ್ಟಿದ್ದರು. ಕಾಂಗ್ರೇಸಿನ ಅಧಿಪತಿಯಾಗಿ ರಾಜ್ಯದ ತುಂಬೆಲ್ಲಾ ಮಿಂಚಿನಂತೆ ಸಂಚಾರ ಮಾಡಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದರು. ೧೯೯4ರಲ್ಲಿ ಜನತಾ ಪಕ್ಷದ ಸರ್ಕಾರ ರಚನೆಯಾಗಿತ್ತು. ರಾಜ್ಯದಲ್ಲಿ ಜನತಾ ಪರಿವಾರದವರ ಹವಾ ಜೋರಾಗಿತ್ತು. ಜನತಾ ಪರಿವಾರದವರು ಅನೇಕ ಜನಪರ ಯೋಜನೆಗಳನ್ನು ತಂದಿದ್ದರು […]
ಇತ್ತೀಚಿಕೆ ಕೇಂದ್ರ ಸಚಿವರಾದ ಜೋಶಿಯವರು ಬಿಜೆಪಿಯ ಕಾರ್ಯಕಾರಣಿ ಸಭೆಯಲ್ಲಿ ಪಕ್ಷ ನಿಷ್ಠೆಯುಳ್ಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ಹಿಂದೆ ನಮ್ಮ ಪಕ್ಷದ ಟಿಕೆಟ್ ತಗೆದುಕೊಳ್ಳುವರು ಇರಲಿಲ್ಲ. ಧಾರವಾಡದ ಲೋಕಸಭೆಗೆ ಸ್ಪರ್ಧೆ ಮಾಡಲು ಯಾರೂ ಆಕಾಂಕ್ಷಿಗಳು ಇರದೇ ಇದ್ದಾಗ ಸಿನಿಮಾ ಹಾಲನಲ್ಲಿ ಕುಳಿತಿದ್ದ ನಿಷ್ಠಾವಂತ ಕಾರ್ಯಕರ್ತರನ್ನು ಹುಡುಕಿ ಲೋಕಸಭೆಗೆ ಸ್ಪರ್ಧೆ ಮಾಡಿ ಎಂದು ಒತ್ತಾಯಿಸಿದ ಕಾಲ ಮತ್ತು ಇಂದು ಒಂದು ಟಿಕೆಟ್ಗೆ ೧೦-೧೫ ಜನ! ಅಂದು ನಾನು ಮಂತ್ರಿ ಬಿಡಿ […]
ಗುರುವಿಂದ ಬಂದುಗಳು ಗುರುವಿಂದ ಪರದೈವಗುರುವಿಂದಲಾದುದು ಪುಣ್ಯ ಲೋಕಕ್ಕೆ ,ಗುರುವಿಂದ ಮುಕ್ತಿ ಸರ್ವಜ್ಞ ! ಗುರುವಿನ ಗುಲಾಮನಾಗುವರೆಗೆ ಮುಕ್ತಿ ಸಿಗದಣ್ಣಾ ! ದೊಡ್ಡವರು ತಮ್ಮ ಜೀವನದ ಅನುಭವಗಳಿಂದ ಆಡಿದ ಮಾತು ಎಲ್ಲ ಕಾಲಕ್ಕೂ ಸತ್ಯ! ಜಗತ್ತಿನ ಎಲ್ಲ ಸಂಶೋಧಕರ ಮತ್ತು ದೊಡ್ಡ ಸಾಧಕರ ಜೀವನ ರೂಪುಗೊಂಡಿದ್ದು ಶಿಕ್ಷರಿಂದಲೇ ಅನ್ನೋದು ಸತ್ಯ. ನೇರವಾಗಿ ಗುರುಗಳ ಅಭಯದಿಂದ ಕಲಿತು ಸಾಧಕರಾಗಿದ್ದು ನೋಡಿದ್ದೇವೆ. ಹಾಗೆ ಗುರುಗಳ ಮೂರ್ತಿಯನ್ನು ಮುಂದೆ ಇಟ್ಕೊಂಡು ಅವರ ಹೇಳಿದ […]