ಆಡಳಿತ ಶಾಸಕರಿಗೆ ಅನುದಾನ ಹೆಚ್ಚು! ಮಸ್ಕಿ ಜನತೆಗೆ ಸಿಟ್ಟು ಮತ್ತು ಸಿಂಪತಿ ಎರಡು ಇವೆ. ಪಕ್ಷಾಂತರಿ ಎನ್ನುವುದು ಒಂದು ಕಡೆ ಆದರೆ ಮತ್ತೊಂದು ಕಡೆ ಪ್ರತಾಪ ಗೌಡರು ಕೆಲಸ ಮಾಡಿದ್ದಾರೆ ಆದರೂ ಇನ್ನೂ ಹೆಚ್ಚಿಗೆ ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಸವರಾಜ ತುರ್ವಿಹಾಳ ಹೊಸ ಅಭ್ಯರ್ಥಿ! ಗೆದ್ದರೂ ಏನು ಮಾಡಲು ಸಾಧ್ಯ? ಸರ್ಕಾರದ ಶಾಸಕರಾದರೆ ಅನುದಾನದ ಸಾಧ್ಯತೆ ಹೆಚ್ಚು ಮತ್ತು ಪಡೆದುಕೊಳ್ಳಲು ಹಾದಿ ಸುಗಮ. […]
ಕೆಳಹಂತದಲ್ಲಿ ಅನುಕಂಪದ ಮಾತು ಕಮ್ಮಿ! ಬಸವರಾಜ ತುರ್ವಿಹಾಳ ಮತ್ತು ಪ್ರತಾಪ ಗೌಡ ಮಧ್ಯೆ ತುರಿಸಿನ ಸ್ಪರ್ಧೆ ಏರ್ಪಟ್ಟಿದೆ. ಮೇಲ್ನೋಟಕ್ಕೆ ಜನರು ಬಸವರಾಜ ಮೇಲೆ ಅನುಕಂಪದ ಕಾರಣ ಸ್ವತಃ ದುಡ್ಡು ಕೊಟ್ಟು ಆಶೀರ್ವಾದ ಮಾಡುತ್ತಿದ್ದಾರೆ ಮತ್ತು ಕಾಂಗ್ರೇಸ್ ಒಂದು ಹೆಜ್ಜೆ ಮುಂದಿದೆ ಎಂಬ ಅಭಿಪ್ರಾಯ. ಆದರೆ ಕೆಳಮಟ್ಟದಲ್ಲಿ ಇಣಕಿ ನೋಡಿದರೆ ಸತ್ಯಕ್ಕೆ ದೂರವಾದ ಮಾತು ಮತ್ತು ಎಲ್ಲೊ ಸ್ವಲ್ಪ ಹಳ್ಳಿಗಳಲ್ಲಿ ಬಸವರಾಜ ಅವರಿಗೆ ಪ್ರೀತಿ ಸಿಕ್ಕಿದೆ ಅದನ್ನೇ ಕಾಂಗ್ರೆಸ್ನವರು […]
ನಾಯಿಯ ಬಾಲ ಯಾವಾಗಲೂ ಡೊಂಕೇ! ಅದನ್ನು ನೀವು ನೇರವಾಗಿ ಮಾಡಬೇಕೆಂದರೂ ಸಾಧ್ಯವಾಗದ ಕೆಲಸ ಕಾರಣ ಡೊಂಕು ಅದರ ಹುಟ್ಟುಗುಣ! ಹಾಗೆ ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರ ಬೀದಿ ರಂಪಾಟ ಹುಟ್ಟುಗುಣ ಎಂದರೆ ತಪ್ಪಾಗಲಾರದು. ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯ ಒಂದೇ ಭಾರತೀಯ ಜನತಾ ಪಕ್ಷದ ಆಡಳಿತ ಇರುವ ಪಕ್ಷ. ಇದು ಮೊದಲ ಬಾರಿಗೆ ನೆರವೇರಿದ್ದು ೨೦೦೮ರಲ್ಲಿ. ನೆನಪಿರಬಹುದು ೨೦೦೮ರ ಭಾರತೀಯ ಜನತಾ ಪಕ್ಷದ ಬೀದಿ ಜಗಳ […]
ಮೋದಿಯ ಅಭಿವೃದ್ಧಿ ಪರ್ವಕಾಲ: ೨೦೧೪ರ ಲೋಕಸಭೆಯ ಚುನಾವಣೆಗೆ ಎಲ್ಲಾ ಪಕ್ಷಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೊದಲ ಬಾರಿಗೆ ದೇಶದಲ್ಲಿ ಜನರ ನಾಯಕ ಜನರ ಮೂಲಕ ಆಯ್ಕೆಯಾಗಿದ್ದರು ಅವರೇ ಸತತ ೧೨ ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ರಾಜ್ಯವನ್ನು ಅಭಿವೃದ್ಧಿ ಮಾಡಿದ ನರೇಂದ್ರ ಮೋದಿ! ನರೇಂದ್ರ ಮೋದಿ ಮುಖ್ಯಮಂತ್ರಿ ಆಗುವಕ್ಕಿಂತ ಮುಂಚೆ ಗುಜರಾತದಲ್ಲಿ ೨೪ ಘಂಟೆಗಳ ಕಾಲ ವಿದ್ಯುತ್ ಇರಲಿಲ್ಲ, ರೈತರಿಗೆ ನೀರಿನ ಸೌಲಭ್ಯ ಇರಲಿಲ್ಲ ಮತ್ತು ಕುಡಿಯುವ ನೀರಿನ […]
By Rakesh GI ನರೇಂದ್ರ ಮೋದಿಯವರ ಮತ್ತು ಬಿಜೆಪಿ ಪಕ್ಷದ ವತಿಯಿಂದ ಇತ್ತೀಚೆಗೆ ಬಹಳಷ್ಟು ಚರ್ಚೆಯಾಗುತ್ತಿರುವ ವಿಷಯವೆಂದರೆ ಒಂದು ದೇಶ, ಒಂದು ಚುನಾವಣೆ. ಈಗ ಪ್ರಚಲಿತದಲ್ಲಿರುವ ಚುನಾವಣೆ ಕ್ರಮದ ಪ್ರಕಾರ ದೇಶದ ಮತ್ತು ರಾಜ್ಯದ ಚುನಾವಣೆಗಳು ಯಾವಾಗ ಬೇಕಾದರೂ ನಡೆಯಬಹುದು. ಅದಕ್ಕೆ ಅದರದೇ ಆದಂತಹ ಸಮಯವಿಲ್ಲ. ಇದರಿಂದ ಆರ್ಥಿಕವಾಗಿ ಅಲ್ಲದೆ ಸಂಪನ್ಮೂಲಗಳ ದೃಷ್ಟಿಯಿಂದ ಬಹಳಷ್ಟು ಹೊರೆಯಾಗಲಿದೆ. ಒಂದು ಅಂದಾಜಿನ ಪ್ರಕಾರ ಎಲ್ಲಾ ಚುನಾವಣೆಗಳು ಒಟ್ಟಿಗೆ ನಡೆಯುವುದರಿಂದ ದೇಶದ […]
ಕಾಲಾಯ ತಸ್ಮೈ ನಮಃ ಎಂಬ ವಾಣಿ ಎಷ್ಟು ಸತ್ಯ ಇದೆ ಅಲ್ವಾ? ಕಾಲಕ್ಕೆ ನಾವು ತಲೆ ಬಾಗಿಸಲೇಬೇಕು ಕಾರಣ ಅದು ಸಾಕ್ಷಿ ಸಮೇತ ಬರುತ್ತೆ!. ಹರಿಯುತ್ತಿರುವ ನದಿ ಯಾವಾಗಲೂ ಎಡ ಮತ್ತು ಬಲ ಬದಿ ಮಧ್ಯದಲ್ಲಿ ಹರಿಯುತ್ತೆ, ಎಂದು ನಂಬಿರುವ ನಾವು ಕೆಲವೊಮ್ಮೆ ನಿಸರ್ಗದ ಹೊಡತಕ್ಕೆ ಎರಡೂ ಬದಿ ತುಂಬಿ ಹರಿಯುವುದುಂಟು. ಜೀವನ ಸುಖ ಮತ್ತು ದುಃಖಗಳ ನಡುವೆ ಸಾಗುತ್ತಿರುವ ಒಂದು ಪಯಣ. ಲಿಮಿಟೆಡ್ ಪಯಣದಲ್ಲಿ ಸುಖ […]
ಬಹಳ ದಿನದ ನಂತರ ಒಂದು ಒಳ್ಳೆಯ ಚಿತ್ರ! ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಿತ್ರ ! ರಾಜಕುಮಾರದಲ್ಲಿ ಸಂಬಂಧಗಳ ಬಗ್ಗೆ ಜನರಿಗೆ ಮನದಟ್ಟಾಗುವಂತೆ ತೋರಿಸಿದ ಸಂತೋಷ್ ಈ ಚಿತ್ರದಲ್ಲಿ ಶಿಕ್ಷಣ , ರಾಜಕೀಯ ಮತ್ತು ಡ್ರಗ್ಸ್ ಬಗ್ಗೆ ಹೇಳಿದ ಹಾಗೆ ಇದೆ. ಅಪ್ಪು ಚಿತ್ರದ ಶೇಡ್ ಇದರಲ್ಲಿ ಕಾಣಿಸುತ್ತದೆ. ಎಂದರೆ ಪುನೀತವರ ಹಾವ ಭಾವಗಳು. ಸಂಭಾಷಣೆ ಸೂಪರ್. ಓಂ ಚಿತ್ರ ನೋಡಿದ್ದೀಯಾ ? ಅದು ನಾವೇ ಪ್ರೊಡ್ಯೂಸ್ […]
ದೇಶದ ಜನರು ಸತತವಾಗಿ ಎರಡು ಬಾರಿ ಲೋಕಸಭೆಗೆ ಒಂದೇ ಪಕ್ಷಕ್ಕೆ ಉದೋ ಎಂದು ವಿಶ್ವಮಟ್ಟದ ನಾಯಕನನ್ನು ತಮ್ಮ ದೇಶದ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಪ್ರಧಾನಮಂತ್ರಿ ಹೇಳುವ ಒಂದೊಂದು ಮಾತು ದೇಶದ ಜನರಿಗೆ ಕೊಡುವ ಸಂದೇಶ ಎಂದರೆ ತಪ್ಪಾಗಲಾರದು. ಇತ್ತೀಚಿಕೆ ಮೋದಿಯವರು ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಇದನ್ನು ಹೇಗೆ ವ್ಯಾಖ್ಯಾನಿಸಬಹುದು? ಕುಟುಂಬ ರಾಜಕಾರಣ ಎಂದರೆ ರಾಜಕೀಯ ಹಿನ್ನೆಲೆಯಲ್ಲಿ ಹುಟ್ಟಿಬಂದ ಕುಡಿಗಳಿಗೆ ರಾಜಕೀಯದಿಂದ ಹೊರಗಿಡಬೇಕಾ? […]
ಬಸವನಾಡಿನಲ್ಲಿ ಒಂದು ಕಡೆ ಬಿಸಿಲಿನ ಝಳ ಪ್ರಾರಂಭವಾಗಿದೆ ಮತ್ತೊಂದು ಕಡೆ ಕರೋನ ಅಬ್ಬರ. ಇದರ ಮಧ್ಯ ಉಪಚುನಾವಣೆಯ ಕಾವು. ವಿಧಾನಸಭೆ ಪಡಶಾಲೆಯಲ್ಲಿ ವಿರೋಧಿಗಳಿಗೆ ಮುಖ್ಯಮಂತ್ರಿಯವರಿಂದ ಸವಾಲ್. ಏನು ಸವಾಲ್ ? ಬರುವ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳು ಗೆದ್ದು ಮತ್ತೆ ನಿಮ್ಮನ್ನು ಭೇಟಿಮಾಡುತ್ತೇನೆ ಆಗ ಚರ್ಚೆ ಮಾಡೋಣ. ಇಂತಹ ಸಂದರ್ಬ ಒದಗಿ ಬಂದಿದ್ದು ವಿರೋಧ ಪಕ್ಷದ ನಾಯಕ ಸರ್ಕಾರವನ್ನು ಇನ್ನಿಲ್ಲಿದಂತೆ ತರಾಟೆಗೆ ತಗೆದೊಕೊಂಡು ಹಿಗ್ಗಾ ಮುಗ್ಗಾ ಜಾಡಿಸುತ್ತುರುವಾಗ ಆಡಳಿತ […]
ಪುಟ ತೆರೆಯುತ್ತಿದೆ.. ಕಾಯಿರಿ. ನಿಮ್ಮ ಅಭಿಪ್ರಾಯ ತಿಳಿಸಿ . ಧನ್ಯವಾದಗಳು.